ಕಟೀಲಿನಲ್ಲಿ ಕಂಪ್ಯೂಟರ್ ಹಸ್ತಾಂತರ
Tuesday, March 31, 2026
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪದವಿಪೂರ್ವ ಕಾಲೇಜಿಗೆ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಹತ್ತು ಕಂಪ್ಯೂಟರ್ ಗಳನ್ನು ಹಸ್ತಾಂತರಿಸಲಾಯಿತು.
ಭೀಮ ಗೋಲ್ಡ್ ನ ಮಾರಾಟ ವಿಭಾಗದ ಅಧಿಕಾರಿ ಗುರುಪ್ರಸಾದ್ ರಾವ್, ಸಹಾಯಕ ಪ್ರಬಂಧಕರಾದ ಹರಿಕೃಷ್ಣ ರಾವ್, ರಾಘವೇಂದ್ರ ಭಟ್, ಕಟೀಲು ದೇಗುಲದ ಅರ್ಚಕ ಸದಾನಂದ ಆಸ್ರಣ್ಣ, ಕಾಲೇಜಿನ ಪ್ರಾಂಶುಪಾಲೆ ಕುಸುಮಾವತಿ, ಪ್ರೌಢಶಾಲೆಯ ಮುಖ್ಯಸ್ಥರಾದ ರಾಜಶೇಖರ, ಗಿರೀಶ್ ರಾವ್ ಮತ್ತಿತರರಿದ್ದರು.