Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಾಹನ ಅಪಘಾತದಲ್ಲಿ ತೀವ್ರಗಾಯವಾದರೂ ಶೈಕ್ಷಣಿಕ ಸಮೀಕ್ಷೆ ನಡೆಸಿದ ಶಿಕ್ಷಕಿ,ದ.ಕ ಜಿಲ್ಲಾಧಿಕಾರಿಯವರಿಂದ ಗೌರವ

ಬಜಪೆ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕರ್ತವ್ಯ ನಡೆಸುವ ಸಂದರ್ಭದಲ್ಲಿ ವಾಹನ ಅಪಘಾತ ನಡೆದು ತೀವ್ರತರ ಗಾಯಗಳಾದರೂ  ಎದೆಗುಂದದೆ ತಮ್ಮ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ  ಶಾಲಾ ಶಿಕ್ಷಕಿ ವಿನ್ನಿ ನಿರ್ಮಲ ಡಿಸೋಜಾ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ದರ್ಶನ್ ಎಚ್ .ವಿ  ಅವರು  ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು ಇಲ್ಲಿಗೆ ಖುದ್ದಾಗಿ ಆಗಮಿಸಿ ಸಮೀಕ್ಷೆ ಸಂದರ್ಭದಲ್ಲಿ ಸಲ್ಲಿಸಿದ ಸೇವೆಗೆ ಅಭಿನಂದನೆಯ ರೂಪವಾಗಿ ಶಿಕ್ಷಕಿಯನ್ನು ಸನ್ಮಾನಿಸಿದರು.ಈ  ಸಂದರ್ಭದಲ್ಲಿ ಶಾಲೆಯ ಹಿಂಬದಿಯ ಗುಡ್ಡ ಕುಸಿತವಾಗಿದ್ದನ್ನು  ವೀಕ್ಷಣೆ ನಡೆಸಿ ಸೂಕ್ತ ಪರಿಹಾರವನ್ನು ಕೈಗೊಳ್ಳುವಂತೆ ಭರವಸೆಯನ್ನು ನೀಡಿದರು.
 ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು, ಕಂದಾಯ ನಿರೀಕ್ಷಕ  ಎನ್ . ಜಿ ಪ್ರಸಾದ್, ಗ್ರಾಮಾಕರಣಿಕ  ನಿತಿನ್, ಎಸ್ ಡಿ ಎಂ ಸಿ ಅಧ್ಯಕ್ಷ  ಸುದೀಪ್  ಅರ್ ಅಮೀನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ  ವಿನೋದ  ಅಮಿನ್ ಉಪಸ್ಥಿತರಿದ್ದರು.