Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ೨೪ ದಿನಗಳ ಭಜನೆ ನಾದಸಂಕೀರ್ತನೋಪಾಸನಾ ಉದ್ಘಾಟನೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ೨೪ದಿನಗಳ ಕಾಲ ನಡೆಯುವ ಭಜನಾ ಕಾರ್ಯಕ್ರಮ ನಾದಸಂಕೀರ್ತನೋಪಾಸನಾ ಉದ್ಘಾಟನೆಗೊಂಡಿತು.
ವಿದ್ವಾಂಸ ರವೀಂದ್ರ ಅತ್ತೂರು ಮಾತನಾಡಿ ಪುರಂದರದಾಸರ ಕಾಲದಿಂದಲೂ ಭಜನೆಗೆ ಮಹತ್ವವಿದೆ. ಉತ್ತರ ಭಾರತದಲ್ಲಿ ಅಭಂಗ, ದಕ್ಷಿಣದಲ್ಲಿ ಭಜನೆ. ಕರ್ನಾಟಕ, ಉತ್ತರಾದಿ ಹೀಗೆ ಸಂಗೀತದ ಮೂಲಕ ದೇವರನ್ನು ಒಲಿಸುವುದು ಸುಲಭದ ದಾರಿಯಾಗಿದೆ ಎಂದರು.
ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ ಮಾತನಾಡಿ ಎಲ್ಲೆಡೆಯಿಂದ ನೂರಾರು ಭಜನಾ ಮಂಡಳಿಯವರು ಯಾವುದೇ ಫಲಾಪೇಕ್ಷೆ ಇಲ್ಲದೆ ಬಂದು ಕೇವಲ ಕಟೀಲಮ್ಮನ ಭಕ್ತಿಯಿಂದ ಭಜನೆ ಹೇಳಿ ಧನ್ಯರಾಗುತ್ತಿರುವುದು ವಿಶೇಷವಾಗಿದೆ ಎಂದರು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಭಜನೆಗೆ ಚಾಲನೆ ನೀಡಿದರು. 
ಭಜನಾ ಸಂಘಟಕಿ ಜ್ಯೋತಿ ಉಡುಪ, 24 ದಿನಗಳ ಕಾಲ ನಡೆಯಲಿರುವ ಭಜನೆಯಲ್ಲಿ 300 ಹೆಚ್ಚು ಭಜನಾ ಮಂಡಳಿಗಳು ಹೆಸರು ನೋಂದಾಯಿಸಿದ್ದು, ಎರಡು ಸಾವಿರಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದರು.