Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಜಪೆ: ಜಿ.ಎಸ್.ಬಿ.ಸೇವಾ ಸಮಿತಿಯ ವತಿಯಿಂದ ವರ್ಷಂಪ್ರತಿ ಜರಗುವ ಶರನ್ನವರಾತ್ರಿಯ ಸಾಂಸ್ಕೃತಿಕ ಹಾಗೂ ಭಜನಾ ಮಹೋತ್ಸವ ಉದ್ಘಾಟನೆ

ಬಜಪೆ: ಜಿ.ಎಸ್.ಬಿ.ಸೇವಾ ಸಮಿತಿಯ ವತಿಯಿಂದ ವರ್ಷಂಪ್ರತಿ ಜರಗುವ ಶರನ್ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು  ಸೇವಾ ಸಮಿತಿಯ ಅಧ್ಯಕ್ಷ ಕೆ.ಸುಧಾಕರ ಕಾಮತ್ ಅವರು  ದೀಪ ಪ್ರಜ್ವಲನೆ ಗೊಳಿಸಿ ಉದ್ಘಾಟಿಸಿದರು. 
ಈ ಸಂದರ್ಭ ಕಾರ್ಯದರ್ಶಿ ಪಿ.ಕೆ.ಹರೀಶ್ ಪೈ ಕತ್ತಲಸಾರ್,ಎಂ ಸತೀಶ್ ಕುಡ್ವ,ಪಿ.ಕೆ.ಸತೀಶ್ ಪೈ,ಎಂ.ಏಕನಾಥ್ ಶೆಣೈ, ಕಾರ್ಯಕಾರಿ ಮಂಡಳಿಯ ಸದಸ್ಯರುಗಳು  ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಜ್ಪೆಯ ಥಂಡರ್ ಗೈಸ್ ನೃತ್ಯ ಅಕಾಡಮಿಯ ಕಲಾವಿದರಿಂದ ನೃತ್ಯವೈಭವ ಪ್ರದರ್ಶಿಸಲ್ಪಟ್ಟಿತು.



ಬಜ್ಪೆಯ ಶ್ರೀ ವಿಠೋಭ ರಖುಮಾಯಿ ದೇವರ ಸನ್ನಿಧಿಯಲ್ಲಿ ವರ್ಷಂಪ್ರತೀ ಜರಗುವ ಶರನ್ನವರಾತ್ರಿ ಭಜನಾ ಮಹೋತ್ಸವ ವಿದ್ಯುಕ್ತವಾಗಿ ಪ್ರಾರಂಭಗೊಂಡಿತು.ಈ ಸಂದರ್ಭ ಅಲಂಕೃತ ಗೊಂಡಿರುವ ಶ್ರೀದೇವರು.