Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶಾಮಿಯಾನ ಸಂಯೋಜನೆ ಸೇವಾ ಟ್ರಸ್ಟ್ (ರಿ.) ಕಿನ್ನಿಗೋಳಿ, ಮುಲ್ಕಿ ವಲಯ ಇದರ 17 ನೇ ವರ್ಷದ ವಾರ್ಷಿಕೋತ್ಸವ

ಕಿನ್ನಿಗೋಳಿ :ಶಾಮಿಯಾನ  ಸಂಯೋಜನೆ ಸೇವಾ ಟ್ರಸ್ಟ್ (ರಿ.) ಕಿನ್ನಿಗೋಳಿ, ಮುಲ್ಕಿ ವಲಯ ಇದರ 17 ನೇ ವರ್ಷದ ವಾರ್ಷಿಕೋತ್ಸವ ಪುನರೂರು ನಾಗವೀಣಾ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಹರಿದಾಸ್ ಎಕ್ಕಾರ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಸತೀಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೂಜಾ ಎರೇಂಜರ್ಸ್,ಹಳೆಯಂಗಡಿಯ ಜಯಕೃಷ್ಣ , ಸುರೇಶ್ ಸುವರ್ಣ ಐಕಳ,ದಿನೇಶ್ ಸಾಗರಿಕ ಎರೇಂಜರ್ಸ್, ಸುದರ್ಶನ್ ಸುರಗಿರಿ ಎರೇಂಜರ್ಸ್, ಸದಾಶಿವ ಶೆಟ್ಟಿಗಾರ್ ದುರ್ಗಾ ಎರೇಂಜರ್ಸ್, ದಿನೇಶ್ ಶೆಟ್ಟಿಗಾರ್, ಜಗನ್ನಾಥ ನಾಯಕ್,ಸ್ಟೇನಿ ರೇಗೊ, ಸತೀಶ್ ಕೋಟ್ಯಾನ್,ನಂದೇಶ್,ಮಲ್ಲಿಕ್ ಮತ್ತಿತರರು ಉಪಸ್ಥಿತರಿದ್ದರು.ಒಕ್ಕೂಟದ ಮಾಲಕರು ಹಾಗೂ ನೌಕರರಿಗೆ ಅಂಚೆ ವಿಮೆಯನ್ನು  ಈ ವೇಳೆ ವಿತರಿಸಲಾಯಿತು.

ಕಾರ್ಯಕ್ರಮದ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳು ನಡೆದು ಬಹುಮಾನ ವಿತರಿಸಲಾಯಿತು.

ಜಗನ್ನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿ, ಸ್ಟೇನಿ ರೇಗೊ ಸ್ವಾಗತಿಸಿ ಧನ್ಯವಾದವಿತ್ತರು.