Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಹೆದ್ದಾರಿಯಲ್ಲಿನ ಹೊಂಡ ಮುಚ್ಚಿದ ರಿಕ್ಷಾ ಚಾಲಕರು

ಬಜಪೆ:ಕಟೀಲು -ಬಜಪೆ  ರಾಜ್ಯ ಹೆದ್ದಾರಿ 67 ರ  ಕಟೀಲು ಹಾಗೂ ಎಕ್ಕಾರಿನಲ್ಲಿ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು,ವಾಹನಗಳ ಸವಾರರಿಗೆ ಆಪಾಯಕಾರಿಯಾಗಿ ಪರಿಣಮಿಸಿತ್ತು. ಎಕ್ಕಾರಿನ ಕುಂಭಕಂಠಿಣಿ ಆಟೋ ಚಾಲಕರುಗಳು ಸೇರಿ  ಹೆದ್ದಾರಿಯಲ್ಲಿನ ಹೊಂಡಗಳನ್ನು ತಾತ್ಕಲಿಕವಾಗಿ ಮುಚ್ಚುವಂತಹ ಕಾರ್ಯವನ್ನು ಮಾಡಿದ್ದಾರೆ.ವಾಹನಿಗರಿಗೆ ಆಪಾಯಕಾರಿಯಾಗಿ ಪರಿಣಮಿಸುತ್ತಿದ್ದ ಹೊಂಡಗಳನ್ನು ಮುಚ್ಚುವ  ಸಮಾಜಮುಖಿ ಕಾರ್ಯವನ್ನು ಮಾಡಿದ ಆಟೋ ಚಾಲಕರುಗಳಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಕಾರ್ಯದಲ್ಲಿ ಎಕ್ಕಾರು ಕುಂಭಕಂಠಿಣಿ ಆಟೋ ಚಾಲಕರುಗಳಾದ ನಾಗೇಶ್ ಅಮೀನ್, ಪ್ರಕಾಶ್ ಕುಡುಬಿ, ಹೇಮಂತ ಶೆಟ್ಟಿ, ಪ್ರಕಾಶ್ ಬೆಲ್ಚಡ, ರಮೇಶ್, ಜಗದೀಶ್ ಆಚಾರ್ಯ, ಉದಯ್ ಶೆಟ್ಟಿ,ಸ್ಥಳೀಯರಾದ ಕೃಷ್ಣ ಕುಂದರ್ ಹಾಗೂ ಗ್ರಾಮಸ್ಥರು ಸಾಥ್ ನೀಡಿದರು.