Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮರ ಬಿದ್ದು ಮನೆಗೆ ಹಾನಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಹಾಯಧನ ಚೆಕ್ ವಿತರಣೆ

ಕಿನ್ನಿಗೋಳಿ:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಿನ್ನಿಗೋಳಿ  ವಲಯದ   ಕವತ್ತಾರು  ಕಾರ್ಯಕ್ಷೇತ್ರದ ಭಾಗ್ಯಶ್ರೀ ಸ್ವ ಸಹಾಯ ಸಂಘದ ಸದಸ್ಯೆ  ಅನಿತಾರವರ  ಮನೆಯ ಬಳಿ ಇದ್ದ ಅಡಿಕೆ ಮರ ಮನೆಯ ಮೇಲೆ ಬಿದ್ದು ಹಾನಿ ಆಗಿದ್ದು , ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹಗ್ಗಡೆಯವರು     3000 ರೂ ಸಹಾಯಧನವನ್ನು ಮಂಜೂರು ಮಾಡಿದ್ದಾರೆ.ಹಾಗೂ ಬ್ರಹ್ಮಶ್ರೀ  ಸಂಘದ ಸುಧಾಕರ್ ರವರ  ಮನೆಗೂ ಮರ ಬಿದ್ದು ಬಿದ್ದು ಹಾನಿಯಾಗಿದ್ದು  ಇವರಿಗೂ 10,000 ರೂ ಸಹಾಯಧನ ವನ್ನು ಮಂಜೂರು ಮಾಡಿದ್ದಾರೆ. 
ಸಹಾಯಧನದ ಚೆಕ್ ನ್ನು ಇಂದು  ಬಜಪೆ ಯೋಜನಾ ಕಛೇರಿಯಲ್ಲಿ  ಹಣಕಾಸು ಪ್ರಬಂಧಕ  ರಾಜೇಶ್ ರವರು   ವಿತರಿಸಿದರು.