ಹಳೆಯಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ 46ನೇ ವರ್ಷದ ಮಹಾಪೂಜಾ ಮಹೋತ್ಸವ
Monday, January 6, 2025
ಹಳೆಯಂಗಡಿ : ಹಳೆಯಂಗಡಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ 46ನೇ ವರ್ಷದ ಮಹಾಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ವಿಶೇಷ ಪ್ರಾರ್ಥನೆ, ಇರುಮುಡಿ ಕಟ್ಟುವುದು, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ಅರ್ಚಕ ವೃಂದ,ಸಮಿತಿಯ ಅಧ್ಯಕ್ಷ ಜಯ ಜಿ ಸುವರ್ಣ, ಗೌರವಾಧ್ಯಕ್ಷ ಜೈ ಕೃಷ್ಣ ಕೋಟ್ಯಾನ್, ಉಪಾಧ್ಯಕ್ಷ ಕರುಣಾಕರ ಗೋಳಿದಡಿ, ಪದಾಧಿಕಾರಿಗಳಾದ ಶಂಕರ್ ಆರ್ ಕೋಟ್ಯಾನ್, ದಿನೇಶ್ ಸ್ವಾಮಿ, ನಿತೇಶ್ ಕುಬಲ ಗುಡ್ಡೆ ದಾಮೋದರ ಅಮೀನ್ ಗೋಳಿದಡಿ ಮತ್ತಿತರರು ಉಪಸ್ಥಿತರಿದ್ದರು.