Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಉಲ್ಲಂಜೆ ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಭಕ್ತರಿಗೆ ಶೇಷ ವಸ್ತ್ರ ವಿತರಣೆ

ಕಟೀಲು:ಕ್ಷೇತ್ರದಲ್ಲಿ ನಿರಂತರವಾಗಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳು ನಡೆಯುತ್ತಿದೆ.ಕ್ಷೇತ್ರಕ್ಕೆ ಭೇಟಿ ನೀಡುವಂತಹ ಭಕ್ತರ ಕಷ್ಟವನ್ನು ಪರಿಹರಿಸುತ್ತಾರೆ.ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಲಲಿತಾ ಪಂಚಮಿಯಂದು ಶ್ರೀದೇವರ ಶೇಷ ವಸ್ತ್ರವನ್ನು ಮಹಿಳಾ ಭಕ್ತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು 
ಕಟೀಲು ಸಮೀಪದ ಉಲ್ಲಂಜೆಯ  ಶ್ರೀ ಕ್ಷೇತ್ರ ಕೊರಗಜ್ಜ  ಮಂತ್ರ ದೇವತಾ ಚಾಮುಂಡೇಶ್ವರೀ ಗುಳಿಗ ಭದ್ರಕಾಳಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ ಅವರು ಹೇಳಿದರು.ಅವರಿಂದು  ನವರಾತ್ರಿ ಮಹೋತ್ಸವದ  ಲಲಿತಾ ಪಂಚಮಿಯ  ಶುಭದಿನದಂದು  ಮಹಿಳಾ ಭಕ್ತರಿಗೆ ಶ್ರೀದೇವರ ಶೇಷ ವಸ್ತ್ರವನ್ನು ವಿತರಿಸಿ ಮಾತನಾಡಿದರು. ಸುಮಾರು 3000 ಮಹಿಳಾ ಭಕ್ತರಿಗೆ ಶ್ರೀದೇವರ ಶೇಷವಸ್ತ್ರವನ್ನು  ಇಂದು ವಿತರಿಸಲಾಯಿತು.

ಈ ಸಂದರ್ಭ ವಸಂತ ಪೂಜಾರಿ,ಪ್ರಕಾಶ್ ಆಚಾರ್ಯ ಕಿನ್ನಿಗೋಳಿ,ರಾಜೇಶ್,ಸಂತೋಷ್ ಹಿರಿಯಡ್ಕ,ಕಾರ್ತಿಕ್ ,ಕೌಶಿಕ್ ,ಗಣೇಶ್ ,ರಾಘು ಹಾಗೂ ಮೊದಲಾದವರು ಉಪಸ್ಥಿತರಿದ್ದರು.