Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅಂಗರಗುಡ್ಡೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಹಿಂದೂ ರುದ್ರ ಭೂಮಿ, ಹೊಸ ಸಮಿತಿ ರಚನೆ

ಮೂಲ್ಕಿ:ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿಮಂತೂರು ಗ್ರಾಮದ ಅಂಗರಗುಡ್ಡೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ  ಹಿಂದೂ ರುದ್ರ ಭೂಮಿಗೆ ಹೊಸ ಸಮಿತಿ ರಚನೆಯ ಸಭೆಯು ಶ್ರೀರಾಮ ಭಜನಾ ಮಂದಿರದಲ್ಲಿ  ನಡೆಯಿತು.

ನೂತನ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿಗಾರ್ , ಉಪಾಧ್ಯಕ್ಷರಾಗಿ ಕಿಶೋರ್ ದೇವಾಡಿಗ, ನವೀನ್ ಪಂಬದ, ಸುಂದರ ಮೇಸ್ತ್ರಿ, ಮೋಹಿನಿ ಸಾಲ್ಯಾನ್,ಕಾರ್ಯದರ್ಶಿಯಾಗಿ ಪ್ರವೀಣ್ ಆರ್ ಶೆಟ್ಟಿ, 
ಜೊತೆ ಕಾರ್ಯದರ್ಶಿಯಾಗಿ ಜೀವನ್ ಶೆಟ್ಟಿ ಅಂಗರಗುಡ್ಡೆ 
ಕೋಶಾಧಿಕಾರಿಯಾಗಿ ತಾರನಾಥ ದೇವಾಡಿಗ ಹಾಗೂ ಸಮಿತಿಯ 20 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ  ಸಂದರ್ಭ  ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ  ಸಂಪತ್ ಕುಮಾರ್, ಸುಧೀರ್ ಶೆಟ್ಟಿ, ದಿನೇಶ್ ಕೋಟ್ಯಾನ್, ಆನಂದ್ ಗುಜರಾನ್, ಚಂದ್ರಶೇಖರ್, ಉಮೇಶ್ ಆಚಾರ್ಯ, ಸತೀಶ್ ಆಚಾರ್ಯ, ರೋಷನ್ ಸಾಲ್ಯಾನ್, ರಾಘವೇಂದ್ರ,ಹರೀಶ್ ಸಫಲಿಗ, ಶಿವಶಂಕರ್, ಯೋಗೀಶ್, ಜಿತೇಶ್ ಕೋಟ್ಯಾನ್, ಕೇಶವ ದೇವಾಡಿಗ, ಸತೀಶ್ ಪೂಜಾರಿ ಹಾಗೂ  ಗ್ರಾಮಸ್ಥರು ಉಪಸ್ಥಿತರಿದ್ದರು.