-->


ಪುನರೂರು: ಸೇವಾ ಸಂಸ್ಥೆಯಿಂದ ಶಿಕ್ಷಣಕ್ಕೆ ಸಹಾಯ ಹಸ್ತ ನಿರಂತರ-ಸುರೇಶ್ ರಾವ್

ಪುನರೂರು: ಸೇವಾ ಸಂಸ್ಥೆಯಿಂದ ಶಿಕ್ಷಣಕ್ಕೆ ಸಹಾಯ ಹಸ್ತ ನಿರಂತರ-ಸುರೇಶ್ ರಾವ್

ಮುಲ್ಕಿ:ಪುನರೂರು "ಸೇವಾನಿಧಿ ಟ್ರಸ್ಟ್ ವತಿಯಿಂದ ಶಿಕ್ಷಣಕ್ಕೆ ಸಹಾಯ ಹಸ್ತ ಕಾರ್ಯಕ್ರಮ ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದ ಪ್ರಾಂಗಣದಲ್ಲಿ   ನಡೆಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ
ಸುರೇಶ್ ರಾವ್ ನೀರಳಿಕೆ ಮಾತನಾಡಿ ಸೇವಾ ಸಂಸ್ಥೆಯ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯ ನಿರಂತರವಾಗಿ ನಡೆಯುತ್ತಿದೆ ಎಂದರು 
ಈ ಸಂದರ್ಭ ಸೇವಾನಿಧಿ ಟ್ರಸ್ಟ್ ನ ಅಧ್ಯಕ್ಷ,ಪ್ರಶಾಂತ್ ಪುನರೂರು, ಕಾರ್ಯದರ್ಶಿ ಗೋವರ್ಧನ್ , ಟ್ರಸ್ಟಿ
 ರವಿ ಶೆಟ್ಟಿ ಪುನರೂರು ಗುತ್ತು - ಸದಸ್ಯ ರಾಕೇಶ್ ಕೊರಗಪ್ಪ  ಪುನರೂರು ,  ಗುರಿಕಾರರು ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಗುರಿಕಾರ ಮುತ್ತಪ್ಪ , ಅಧ್ಯಕ್ಷ
ಪಿ ಹರೀಶ್ , ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಆರ್,ಹೇಮಾನಂದ್ ಪುನರೂರು,ರವೀಂದ್ರ ದೇವಾಡಿಗ ಪುನರೂರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಮಂತೂರು
 ಶ್ರೀ ಶಾರದಾ ಮಾದರಿ ಶಾಲೆಯ ಬಡ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಸ್ತಾಂತರಿಸಲಾಯಿತು.ಹಾಗೂ
ಸಾಧಕರ ನೆಲೆಯಲ್ಲಿ  ಪತ್ರಕರ್ತ ಪುನೀತ್ ಕೃಷ್ಣ ರವರನ್ನು ಗೌರವಿಸಲಾಯಿತು
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article