Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ ವಿಶೇಷ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಕಿನ್ನಿಗೋಳಿ : ಇಲ್ಲಿನ ಸೈಂಟ್ ಮೇರೀಸ್ ಸ್ಪೆಷಲ್ ಶಾಲೆಯಲ್ಲಿ  
ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಬ್ಯಾಂಕ್ ಕಿನ್ನಿಗೋಳಿ ಶಾಖೆ ಹಾಗೂ ಜೀವನ್ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.  ವಿಶೇಷ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳಿಗೆ ಬ್ಯಾಂಕ್ ವತಿಯಿಂದ ಉಡುಗೊರೆ ನೀಡಲಾಯಿತು. 
ಶಾಲಾ ಸಂಚಾಲಕರಾದ ಫಾ. ಜೋಕಿಂ ಫೆರ್ನಾಂಡಿಸ್, ಕಿನ್ನಿಗೋಳಿ ಚರ್ಚ್ ನ ಸಹಾಯಕ ಗುರುಗಳಾದ ಸ್ಟೀವನ್ ಕುಟಿನ್ಹೊ
ಜೀವನ್ ಜ್ಯೋತಿ ಚಾರಿಟೆಬಲ್ ಕಾರ್ಯದರ್ಶಿ ಶ್ರೀಮತಿ ಶೈಲಾ ಸ್ವೀಕೆರಾ ಕಿನ್ನಿಗೋಳಿ ಚರ್ಚ್ ಉಪಾಧ್ಯಾಕ್ಷ  ವಿಲಿಯಂ ಡಿಸೋಜ ಕಾರ್ಯದರ್ಶಿ ಮೈಕಲ್ ಪಿಂಟೊ, ಉದ್ಯಮಿ ರೊನಾಲ್ಡ್ 
ಮುಲ್ಕಿ ಪೊಲೀಸ್ ಠಾಣೆಯ
 ಎಎಸ್ ಐ 
ಸುರೇಶ್ ಕುಂದರ್, ಬ್ಯಾಂಕ್ ಶಾಖಾ ಮೆನೇಜರ್ ಶ್ರೀಮತಿ ಮನಿಷಾ ರೈ ಎನ್. ಉಪಸ್ಥಿತರಿದ್ದರು.