Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಆಟಿ ಯಲ್ಲೊಂದು ದಿನ ಕಾರ್ಯಕ್ರಮ

ಕಿನ್ನಿಗೋಳಿ : ನೆಹರೂ ಯುವ ಕೇಂದ್ರ ಮಂಗಳೂರು ಮತ್ತು ನವಜ್ಯೋತಿ ಮಹಿಳಾ ಮಂಡಳಿ.(ರಿ )ಪಂಜ ಕೊಯಿಕುಡೆ, ಇದರ ನೇತೃತ್ವದಲ್ಲಿ 'ಆಟಿ ಯಲ್ಲೊಂದು ದಿನ 'ಕಾರ್ಯಕ್ರಮ ವು ಜು.21 ರಂದು ಮಹಿಳಾ ಮಂಡಲದ ಕಟ್ಟಡ ದಲ್ಲಿ ಜರುಗಿತು.
 ನಿವೃತ ಶಿಕ್ಷಕಿ  ಹಾಗೂ ಸಮಾಜ ಸೇವಕಿ ಮೀರಾಬಾಯಿ.ಕೆ   ಹಳೆಯಂಗಡಿ ಅವರು  ಚೆನ್ನೆ ಮಣೆ ಆಡುದರ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ ದರು.

ತುಳುನಾಡಿನಲ್ಲಿ ಆಟಿ ತಿಂಗಲಿನಲ್ಲಿ ತಯಾರಿಸುವ ತಿಂಡಿ ತಿನಿಸುಗಳನ್ನು ಸದಸ್ಯರುಗಳು  ಮನೆಯಲ್ಲಿ ತಯಾರು ಮಾಡಿ ತಂದು ಎಲ್ಲರೂ ಒಟ್ಟಾಗಿ ಊಟ ವನ್ನು ಸವಿದರು.

ಮಹಿಳಾ ಮಂಡಳಿಯ ಅಧ್ಯಕ್ಷೆ  ಕುಸಲಾ ಶೇಖರ್  ಸ್ವಾಗತಿಸಿದರು. ನಿಶ್ವಿತಾ ಪ್ರವೀಣ್  ಧನ್ಯವಾದ ವಿತ್ತರು. ಅಮಿತಾ ದೇವಾಡಿಗ ಕಾರ್ಯಕ್ರಮ  ನಿರೂಪಿಸಿದರು.