ಭಾರೀ ಮಳೆ ಗಾಳಿ,ಹಲವೆಡೆ ಹಾನಿ
Wednesday, July 31, 2024
ಮುಲ್ಕಿ: ಕಳೆದ ಎರಡು ದಿನಗಳಿಂದ ಸುರಿದಭಾರೀ ಮಳೆ ಹಾಗೂ ಗಾಳಿಗೆ ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂರು ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಕರ್ನೀರೆ ಪಲಿಮಾರು ರಸ್ತೆ ಸಂಪರ್ಕ ತಡೆ ಉಂಟಾಗಿತ್ತು. ಈ ಸಂದರ್ಭ ಬಳ್ಕುಂಜೆ ,ಕರ್ನೀರೆ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು ಸ್ಥಳಕ್ಕೆ ಕಿನ್ನಿಗೋಳಿ ಮೆಸ್ಕಾಂ ಇಲಾಖೆ ಭೇಟಿ ನೀಡಿ ಪರಿಶೀಲಿಸಿದ್ದು ದುರಸ್ತಿ ಕಾರ್ಯ ನಡೆದಿದೆ.
ಬಳ್ಕುಂಜೆ ಕೊಡಮಜಲು ಎಂಬಲ್ಲಿ ಸುಂದರಿ ಶೆಟ್ಟಿ ರವರ ತೆಂಗಿನ ಮರ ಬಾವಿ ಮತ್ತು ಹೊಸ ಬೈಕ್ ಮೇಲೆ ಉರುಳಿದ್ದು, ಬಾವಿ ಮತ್ತು ಬೈಕ್ ಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಬಳ್ಕುಂಜೆ ಗ್ರಾಪಂ ಅಧ್ಯಕ್ಷೆ ಮಮತಾ ಶೆಟ್ಟಿ, ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್,ಪಿಡಿಓ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನದಿ ತೀರದ ವಾಸಿಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ.