ಅಶ್ವಥ ಗಿಡ ನೆಡುವ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ
Sunday, June 9, 2024
ಪಕ್ಷಿಕೆರೆ:ಕೆಮ್ರಾಲ್ ಆರಿಂಜಕಾಡು ಹತ್ತಿರದ ಅತ್ಯಂತ ಹಳೆಯ ಅಶ್ವಥ ಕಟ್ಟೆ ಶಿಥಿಲಾವಸ್ಥೆಗೊಂಡಿದ್ದು ,ಕಳೆದ ವರ್ಷ ಕಲದ ಹರಕೆಯ ಸಂದರ್ಭದಲ್ಲಿ ಶ್ರೀ ಕೋರ್ದಬ್ಬು ದೈವವು ಈ ಅಶ್ವಥಕಟ್ಟೆಯನ್ನು ಪುನರ್ ಚೇತನ (ಜೀರ್ಣೋದ್ಧಾರ)ಗೊಳಿಸಬೇಕೆಂದು ದೈವದ ನುಡಿಯಾಗಿದೆ.ಈ ಪುಣ್ಯ ಕಾರ್ಯಕ್ಕೆ ಊರಿನ ಪ್ರಮುಖರು ಮುಂದಾಗಿದ್ದು .ಇದರ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ಅತ್ತೂರುಬೈಲುಮನೆ ವೆಂಕಟರಾಜ ಉಡುಪ ಇವರ ಪೌರೋಹಿತ್ಯದಲ್ಲಿ ಅಶ್ವಥ ಗಿಡ ನೆಡುವ ಮೂಲಕ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಯಿತು.