-->


ಶಿಬರೂರು:ಮಹಾ ಸಂಪ್ರೋಕ್ಷಣೆ , ಮಂಗಳ ಮಂತ್ರಾಕ್ಷತೆ

ಶಿಬರೂರು:ಮಹಾ ಸಂಪ್ರೋಕ್ಷಣೆ , ಮಂಗಳ ಮಂತ್ರಾಕ್ಷತೆ

ಕಟೀಲು :ಶಿಬರೂರು ಶ್ರೀ  ಕೊಡಮಣಿತ್ತಾಯ ದೈವಸ್ಥಾನದಲ್ಲಿ ಎ.22 ರಿಂದ ಎ.30 ರ ತನಕ  ಬ್ರಹ್ಮ ಕುಂಭಾಭಿಷೇಕ , ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿದ್ದು,ಆ ಪ್ರಯುಕ್ತ  ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಕಟೀಲು ಅಸ್ರಣ್ಣ ಬಂಧುಗಳ ಉಪಸ್ಥಿತಿಯಲ್ಲಿ ಮಹಾ ಸಂಪ್ರೋಕ್ಷಣೆ ಹಾಗೂ ಮಂಗಳ ಮಂತ್ರಾಕ್ಷತೆಯು ಶುಕ್ರವಾರದಂದು  ನಡೆಯಿತು.

 ಕ್ಷೇತ್ರದ ತಂತ್ರಿಗಳಾದ ವೇದವ್ಯಾಸ ತಂತ್ರಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ  ಅರ್ಚಕರಾದ ಹರಿನಾರಾಯಣ ಆಸ್ರಣ್ಣ, ತಿಬಾರ ಗುತ್ತಿನಾ‌ರ್ ಉಮೇಶ್ ಎನ್ ಶೆಟ್ಟಿ ,ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ  ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತು  ಮನೆಯವರು, ವಿವಿಧ ಉಪಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು

ನಂತರ  ಭಕ್ತರಿಗೆ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article