-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ನಂದಿನಿ ಕ್ರಿಕೆಟರ್ಸ್ ಮಲ್ಲಿಗೆ ಅಂಗಡಿಗೆ ಕೊಂಡೇಲ ಚಾಂಪಿಯನ್ಸ್ ಟ್ರೋಪಿ 2024

ನಂದಿನಿ ಕ್ರಿಕೆಟರ್ಸ್ ಮಲ್ಲಿಗೆ ಅಂಗಡಿಗೆ ಕೊಂಡೇಲ ಚಾಂಪಿಯನ್ಸ್ ಟ್ರೋಪಿ 2024

ಕಟೀಲು : 40 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ  ತರುಣ ವೃಂದ (ರಿ) ಕೊಂಡೇಲ ಕಟೀಲು ಇವರ ಆಶ್ರಯದಲ್ಲಿ  ಕೊಂಡೇಲದ ಮದಕ ಮೈದಾನದಲ್ಲಿ ನಡೆದ  30  ಗಜಗಳ ಲೀಗ್ ಮಾದರಿಯ ಪಂದ್ಯಕೂಟದಲ್ಲಿ ಆಯ್ದ 8  ತಂಡಗಳ ಪಂದ್ಯಾಟದಲ್ಲಿ ಅಂತಿಮವಾಗಿ ನಂದಿನಿ ಕ್ರಿಕೆಟರ್ಸ್ ಮಲ್ಲಿಗೆ ಅಂಗಡಿ ತರುಣ ವೃಂದ ಏ ತಂಡವನ್ನು 34 ರನ್ ಅಂತರದಲ್ಲಿ ಮಣಿಸಿ ಪ್ರಶಸ್ತಿ ತನ್ನದಾಗಿಸಿ ಕೊಂಡಿದೆ. ಸಮಾರೋಪ ಸಮಾರಂಭದಲ್ಲಿ  ಶ್ರೀ ಕ್ಷೇತ್ರ ಕಟೀಲಿನ ಶ್ರೀ ದೇವಿ ಕುಮಾರ ಅಸ್ರಣ್ಣ ಅವರು ಭಾಗವಹಿಸಿ ಮಾತನಾಡಿ
ಸಮಾಜದಲ್ಲಿ ದೈಹಿಕ ಹಾಗು ಮಾನಸಿಕವಾಗಿ ಸದೃಢರಾಗಲು ಅಂಕಣದಲ್ಲಿ ಕ್ರಿಕೆಟ್ ಆಟ ಉತ್ತಮ ವ್ಯಾಯಾಮವಾಗಿದೆ ಎಂದರು.
 ಈ ಸಂದರ್ಭ ಕೊಡೆತ್ತೂರು ಹೊಸಮನೆ ಕಿರಣ್ ಶೆಟ್ಟಿ, ಲೋಕಯ್ಯ ಸಾಲಿಯಾನ್ ಕೊಂಡೇಲ , ಕಿರಣ್ ಶೆಟ್ಟಿ ಕಾವೂರ್ ಹಾಗು ತರುಣ ವೃಂದದ ಅಧ್ಯಕ್ಷ ಪ್ರವೀಣ್ ಕೋಟ್ಯಾನ್  ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಕೂಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು  ಚೇತನ್ , ನಂದಿನಿ ಕ್ರಿಕೆಟರ್ಸ್ ನ  ಮ್ಯಾನ್ ಆ ದಿ ಮ್ಯಾಚ್ ಪ್ರಶಸ್ತಿಯನ್ನು  ಸಚಿನ್ ,ಉತ್ತಮ ದಾಂಡಿಗ ಹಾಗು ಉತ್ತಮ  ಎಸೆತಗಾರ ತರುಣದ ವೃಂದ ತಂಡದ ಶಶಿ ದುರ್ಗಾ ಹಾಗು ವೀರೇಶ್ ಗಾಣಿಗ  ಅವರು ಪಡೆದರು. ಅಶೋಕ್ ಸುವರ್ಣ  ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ