ಗಂಜಿಮಠ:ಅಭ್ಯರ್ಥಿ ಪದ್ಮರಾಜ್ ಪರ ಮತಯಾಚನೆ
ಕೈಕಂಬ :ಗಂಜಿಮಠ ವಲಯ ಕಾಂಗ್ರೆಸ್ ಬೂತ್ ವ್ಯಾಪ್ತಿಯ ಬಡಗ ಉಳಿಪಾಡಿಯ 2ನೇ ವಾರ್ಡ್ ನ ಮನೆಗಳಿಗೆ ಎ. 16ರಂದು ಭೇಟಿ ನೀಡಿದ ಬೂತ್ ಅಧ್ಯಕ್ಷ ಅಶ್ಪಕ್, ಗಂಜಿಮಠ ಪಂಚಾಯತ್ ಸದಸ್ಯರಾದ ಸಾದಿಕ್ ಮತ್ತು ರೋಹಿತಾಕ್ಷಿ, ತಾಪಂ ಮಾಜಿ ಸದಸ್ಯ ಸುನಿಲ್ ಗಂಜಿಮಠ ಮತ್ತಿತರರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪದ್ಮರಾಜ್ ಪರವಾಗಿ ಮತ ಯಾಚಿಸಿ, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದರು.