ಕೊಡೆತ್ತೂರು ಶ್ರೀ ಅರಸು ಕುಂಜರಾಯರ ಪ್ರಧಾನ ಶಿಲಾಮಯ ಗುಂಡದ ( ಮಾಡ) ಪವಿತ್ರವಾದ ಮುಟ್ಟಿಮರ ( ಮೆಟ್ಟಿಲು ಮರ) ನಿಲ್ಲಿಸುವ ಕಾರ್ಯಕ್ರಮ
Monday, February 12, 2024
ಕಟೀಲು:ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಶ್ರೀ ಅರಸು ಕುಂಜರಾಯರ ಪ್ರಧಾನ ಶಿಲಾಮಯ ಗುಂಡದ ( ಮಾಡ) ಪವಿತ್ರವಾದ ಮುಟ್ಟಿಮರ ( ಮೆಟ್ಟಿಲು ಮರ) ನಿಲ್ಲಿಸುವ ಕಾರ್ಯಕ್ರಮವು ಭಾನುವಾರದಂದು ನೆರವೇರಿತು. ಕರಸೇವೆಯ ಮೂಲಕ ಮುಟ್ಟಿಮರ ನಿಲ್ಲಿಸುವ ಕಾರ್ಯಕ್ರಮವು ನಡೆಯಿತು. ಮುಟ್ಟಿಮರವನ್ನು ದೇಜಪ್ಪ ದೋಗ್ರ ಶೆಟ್ಟಿ ಮತ್ತು ಮಕ್ಕಳು ಪೆಜತ್ತಿಮಾರು ಕೊಡೆತ್ತೂರು ಇವರು ಸೇವಾ ರೂಪದಲ್ಲಿ ಸಮರ್ಪಣೆ ಮಾಡಿದ್ದಾರೆ.