ದ.ಕ ಜಿಲ್ಲಾ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಕ್ರಿಕೆಟ್ ಪಂದ್ಯದಲ್ಲಿ ವಾರ್ತಾ ಭಾರತಿ ಪ್ರಥಮ,ಅಭಿಮತ ದ್ವಿತೀಯ
Tuesday, January 30, 2024
ಮಂಗಳೂರು;ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಪತ್ರಕರ್ತರ ವಾರ್ಷಿಕ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ವಾರ್ತಾಭಾರತಿ ಪ್ರಥಮ, ಅಭಿಮತ ದ್ವಿತೀಯ ಸ್ಥಾನ ಗಳಿಸಿದೆ.
ನೆಹರು ಮೈದಾನದಲ್ಲಿ ಭಾನುವಾರ ನಡೆದ
ಸಮಾರೋಪ ಸಮಾರಂಭದಲ್ಲಿ
ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ
ರೋಹನ್ ಕಾರ್ಪೊರೇಷನ್ ನ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ಆಗಮಿಸಿ ಶುಭ ಹಾರೈಸಿದರು.
ಬ್ರ್ಯಾಂಡ್ ಮಂಗಳೂರು ಹೆಸರಿನಲ್ಲಿ ಮಂಗಳೂರಿನ ಸಕಾರಾತ್ಮಕ ಬೆಳವಣೆಗೆಗೆ ಪತ್ರಕರ್ತರ ಕೊಡುಗೆ ಶ್ಲಾಘನೀಯ ಎಂದು ರೋಹನ್ ಮೊಂತೆರೊ ಹೇಳಿದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯ ದರ್ಶಿ ಜಿತೇಂದ್ರ ಕುಂದೇಶ್ವರ,