Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ ಸಮ್ಮೇಳನ ಕವನ ಕಥೆ ಸ್ಫರ್ಧೆ ಫಲಿತಾಂಶ


ಮೂಲ್ಕಿ : ಡಿಸೆಂಬರ್ 27ರಂದು ಮೂಲ್ಕಿ ಸರಕಾರಿ ಕಾಲೇಜಿನಲ್ಲಿ ನಡೆಯಲಿರುವ ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ಕವನ ಹಾಗೂ ಕಥೆ ರಚನೆ ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು.  ವಿಜೇತರಿಗೆ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು ಎಂದು ತಾಲೂಕು ಘಟಕಾಧ್ಯಕ್ಷ ಮಿಥುನ ಉಡುಪ ತಿಳಿಸಿದ್ದಾರೆ. 
ಕವನ ರಚನೆಯಲ್ಲಿ ಪ್ರೇಮ ಆರ್.ಶೆಟ್ಟಿ ಪ್ರಥಮ. ಶುಭಲಕ್ಷ್ಮಿ ಆರ್.ನಾಯಕ್ ದ್ವಿತೀಯ. 
ಸುಶ್ಮಿತ ಎಸ್.ನಾನಿಲ್  ತೃತೀಯ ಬಹುಮಾನ ಗಳಿಸಿದ್ದಾರೆ. 
 ಕಥಾ ಸ್ಪರ್ಧೆಯಲ್ಲಿ ನೀಲಾಧರ ಎಸ್.ಶೆಟ್ಟಿ. ಚಿತ್ರಾಪು ಪ್ರಥಮ. ರಾಧಿಕಾ ಗಣೇಶ್ ಅತಿಕಾರಿ ಬೆಟ್ಟು ದ್ವಿತೀಯ, ಪ್ರಜ್ವಲಾ ಶೆಣೈ ಪದ್ಮನೂರು ತೃತೀಯ ಬಹುಮಾನ ಗಳಿಸಿದ್ದಾರೆ.