-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಸುರತ್ಕಲ್ :ಹಿಮ್ಮುಖ ಚಲಿಸಿದ ಲಾರಿ,ಓರ್ವನಿಗೆ ಗಂಭೀರ ಗಾಯ,ಹಲವು ವಾಹನಗಳು ಜಖಂ

ಸುರತ್ಕಲ್ :ಹಿಮ್ಮುಖ ಚಲಿಸಿದ ಲಾರಿ,ಓರ್ವನಿಗೆ ಗಂಭೀರ ಗಾಯ,ಹಲವು ವಾಹನಗಳು ಜಖಂ

ಸುರತ್ಕಲ್:  ಹಿಮ್ಮುಖವಾಗಿ ಚಲಿಸಿದ ನಿಲ್ಲಿಸಿದ್ದ ಲಾರಿ: ಓರ್ವನಿಗೆ ಗಂಭೀರ ಗಾಯ, ಹಲವು ಕಾರು, ಬೈಕ್ ಗಳು ಜಖಂ

ಸುರತ್ಕಲ್: ಲಾರಿಯೊಂದು  ಹಿಮ್ಮುಖವಾಗಿ ಚಲಿಸಿದ ಪರಿಣಾಮ  ಓರ್ವ ಗಂಭೀರ ಗಾಯಗೊಂಡು,  ಕಾರುಗಳು , ದ್ವಿಚಕ್ರ ವಾಹನ ಹಾಗೂ ಬಟ್ಟೆ ಮಳಿಗೆಯೊಂದು ಜಖಂಗೊಂಡಿರುವ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.

ಮಂಗಳೂರು ನೋಂದಣಿಯ ಸರಕು ಹೇರಿಕೊಂಡಿದ್ದ ಲಾರಿ ರೋರೋ ರೈಲಿನಲ್ಲಿ ತೆರಳುವ ಸಲುವಾಗಿ ಸುರತ್ಕಲ್ ಪೇಟಯಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಲಾರಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಹೊರಗೆ ತೆರಳಿದ್ದ ಎನ್ನಲಾಗಿದೆ.

ಈ ವೇಳೆ ಲಾರಿ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್‌ಬಳಿ ನಿಲ್ಲಿಸಲಾಗಿದ್ದ ಲಾರಿ ಯುಟರ್ನ್ ನಲ್ಲಿ ಸಲೀಸಾಗಿ ಹಿಮ್ಮುಖವಾಗಿ ಚಲಿಸಿ ವಿರುದ್ಧ ಪಾಶ್ವದಲ್ಲಿರುವ  ಮೂಡ ಮಾರುಕಟ್ಟೆಯ ಪಾರ್ಕಿಂಗ್ ನಲ್ಲಿ‌ ನಿಲ್ಲಿಸಲಾಗಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಾರಿನ ಬಳಿ ನಿಂತಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಸುರತ್ಕಲ್ ಸಂಚಾರ ಪೊಲೀಸರು  ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ