-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮಧ್ಯ ವಾಲ್ಮೀಕಿ ಆಶ್ರಮ ವಸತಿ  ಶಾಲೆಯಲ್ಲಿ ಸಮ್ಮಿಲನ - ಸಹಭೋಜನ ಕಾರ್ಯಕ್ರಮ

ಮಧ್ಯ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಸಮ್ಮಿಲನ - ಸಹಭೋಜನ ಕಾರ್ಯಕ್ರಮ

ಸುರತ್ಕಲ್ :   ದುರ್ಗಾ  ಕಲ್ಚರಲ್    &ಕ್ರಿಕೆಟ್ ಕ್ಲಬ್  ಎಕ್ಕಾರು ಇವರ ಆಶ್ರಯದಲ್ಲಿ ಸುರತ್ಕಲ್ ಸಮೀಪದ ಮಧ್ಯ ವಾಲ್ಮೀಕಿ ಆಶ್ರಮ  ವಸತಿ ಶಾಲೆಯಲ್ಲಿ ಇಂದು ಆಶ್ರಮ ಶಾಲೆಯ  ಮಕ್ಕಳ ಜತೆ ಸಮ್ಮಿಲನ ಸಹಭೋಜನ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಎಕ್ಕಾರು ಮಾತನಾಡಿ 
ಸಾಮಾಜಿಕ ಕಳಕಳಿಯೊಂದಿಗೆ ಮಕ್ಕಳಲ್ಲಿ ಅನಾಥಪ್ರಜ್ಞೆ ಕಾಡದ ರೀತಿಯಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆದಾಗ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವ ಪೂರಕ ವಾತಾವರಣ ವೃದ್ಧಿಯಾಗುತ್ತದೆ  ಎಂದು ಹೇಳಿದರು.

 ಅನಾಥ ಮಕ್ಕಳ ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ವಸತಿನಿಲಯ ( ಹಾಸ್ಟೆಲ್ ‍) ಸಹಿತ 1ರಿಂದ 10ನೇ ತರಗತಿವರೆಗೆ ತರಗತಿಗಳಿರುವ ಕರ್ನಾಟಕ ರಾಜ್ಯದ ಏಕೈಕ ಆಶ್ರಮ ವಸತಿ ಶಾಲೆಯಾಗಿ ಗುರುತಿಸಿಕೊಂಡಿರುವ ಮಧ್ಯ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ 219 ಮಕ್ಕಳಿದ್ದು ಆ ಪೈಕಿ 55 ಮಂದಿ ಬಾಲಕಿಯರಿದ್ದಾರೆ.ಶಾಲೆಯಲ್ಲಿ 
ಅತ್ಯುತ್ತಮ ಗಾಯಕ ಪ್ರತಿಭೆಗಳಿವೆ , ಡ್ರಾಯಿಂಗ್ - ಪೇಂಟಿಂಗ್ ನಲ್ಲಿ ನಿಷ್ಣಾತರಿದ್ದಾರೆ , ಕ್ರೀಡೆಯಲ್ಲಿ ಪರಿಣತರಿದ್ದಾರೆ , ನೃತ್ಯ - ಭಜನೆಗಳಲ್ಲಿ ಮನ ಸೆಳೆಯುವ ಸಾಧನೆಯಿದೆ. ಪ್ರತಿನಿತ್ಯ ಸಾಯಂಕಾಲ ಹಾಗೂ ಬೆಳಿಗ್ಗೆ ಮಕ್ಕಳು ಸಾಮೂಹಿಕವಾಗಿ ಭಜನೆ ಮಾಡುತ್ತಾರೆ.


ಮಿಥುನ ಟಿ.ಎನ್ 
ಶಾಲಾ ಮುಖ್ಯ ಶಿಕ್ಷಕಿ 

 " ದಿನಚರಿ ವೇಳಾಪಟ್ಟಿ ಪ್ರಕಾರವೇ ನಿತ್ಯದ ಕಾರ್ಯಾಚರಣೆ ನಡೆಯುತ್ತದೆ. ಚಾರ್ಟ್ ಪ್ರಕಾರವೇ ವಾರದ ಎಲ್ಲಾ ದಿನಗಳ ಆಹಾರ - ತಿನಿಸುಗಳ ವ್ಯವಸ್ಥೆಯಾಗುತ್ತದೆ.  ಶೈಕ್ಷಣಿಕವಾಗಿಯೂ ಇಲ್ಲಿನ ಮಕ್ಕಳು ಉತ್ತಮ ಫಲಿತಾಂಶ ಪಡೆದಿರುತ್ತಾರೆ.


ನಿಂಗರಾಜು 

ನಿಲಯ ನಿರ್ವಾಹಕರು 

ಎಕ್ಕಾರು ದುರ್ಗಾ ಕ್ರಿಕೆಟ್ ಮತ್ತು ಕಲ್ಚರಲ್ ಕ್ಲಬ್ ನ ಗೌರವಾಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಅವರು ಮಹಾಪೋಷಕರಾಗಿ ಸಂಯೋಜಿಸಿದ ಸಮ್ಮಿಲನ - ಸಹಭೋಜನ ಕಾರ್ಯಕ್ರಮದಲ್ಲಿ ಕ್ಲಬ್ ನ ಪದಾಧಿಕಾರಿಗಳು , ಸದಸ್ಯರು , ವಸತಿ ಶಾಲೆಯ ವಿದ್ಯಾರ್ಥಿಗಳು ಬೋಧಕ - ಬೋಧಕೇತರ ಸಿಬ್ಬಂದಿ ಜತೆ ಸಹಭೋಜನದಲ್ಲಿ ಪಾಲ್ಗೊಂಡರು. ಈ ಹಿಂದೆ ಉದ್ಯಮಿ ಪ್ರದೀಪ್ ಕುಮಾರ್ ಶೆಟ್ಟಿ ಅವರು ವೈಯಕ್ತಿಕವಾಗಿ ನಾನಾ ರೀತಿಯ ಸೇವಾ ಚಟುವಟಿಕೆಗಳನ್ನು ನಡೆಸಿದ್ದರು.

ಎಕ್ಕಾರು ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಆಚಾರ್ಯ, ಸದಸ್ಯ ಸುದೀಪ್ ಅಮೀನ್ , ಡಿಸಿಸಿ ಕ್ಲಬ್ ನ ಪದಾಧಿಕಾರಿಗಳಾದ ಪ್ರಕಾಶ್ ಕುಕ್ಯಾನ್ , ಭಾರತಿ ಶೆಟ್ಟಿ , ದುರ್ಗಾ ಮಹಿಹಾ ಮಂಡಲದ ಅಧ್ಯಕ್ಷೆ ತೇಜಸ್ವಿನಿ ರಾವ್ , ವಿದ್ಯಾರ್ಥಿ ನಾಯಕ ಶ್ರೀಶೈಲ,ಜೀವಿತಾ ಶೆಟ್ಟಿ  ಉಪಸ್ಥಿತರಿದ್ದರು. 
ಹಿರಿಯ ಶಿಕ್ಷಕಿ ಸುನಂದಾ ಸ್ವಾಗತಿಸಿದರು. ಶಿಕ್ಷಕಿ ಗಾಯತ್ರಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ