-->

 ಜೀವನದಲ್ಲಿ ಗುರು ಹಿರಿಯರಿಗೆ ವಿಧೇಯರಾಗುವ ಮೂಲಕ ಸಾಧಕರಾಗಿ -ಜ್ಯೋತಿಷಿ ವಿಶ್ವನಾಥ ಭಟ್

ಜೀವನದಲ್ಲಿ ಗುರು ಹಿರಿಯರಿಗೆ ವಿಧೇಯರಾಗುವ ಮೂಲಕ ಸಾಧಕರಾಗಿ -ಜ್ಯೋತಿಷಿ ವಿಶ್ವನಾಥ ಭಟ್

ಮುಲ್ಕಿ: ಕಿಲ್ಪಾಡಿ ಹಿರಿಯ ಸಾಧಕ ಜ್ಯೋತಿಷ್ಯ ರತ್ನ ದಿ.ಗೋವಿಂದ ಭಟ್ ಜನ್ಮದಿನದ ಪ್ರಯುಕ್ತ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಮುಲ್ಕಿಯ ಸಿಎಸ್ಐ ಬಾಲಿಕಾಶ್ರಮ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಈ ಸಂದರ್ಭ ಹಿರಿಯ ಜ್ಯೋತಿಷಿ ವಿಶ್ವನಾಥ ಭಟ್ ಮಾತನಾಡಿ ಎಳವೆಯಲ್ಲಿ ನಮಗೆ  ಉತ್ತಮ ಜೀವನ ಕಲಿಸಿ ಸಮಾಜದಲ್ಲಿ ಯೋಗ್ಯರನ್ನಾಗಿ ಮಾಡಿದ ಮಾತಾ ಪಿತೃಗಳ ಋಣ ಸಂದಾಯ ದೊಡ್ಡ ಭಾಗ್ಯವಾಗಿದ್ದು ಜೀವನದಲ್ಲಿ ಗುರು ಹಿರಿಯರಿಗೆ ವಿಧೇಯರಾಗುವ ಮೂಲಕ ಸಾಧಕರಾಗಿ ಎಂದರು 
ಈ ಸಂದರ್ಭ ಉಷಾ ವಿಶ್ವನಾಥ ಭಟ್, ಬಪ್ಪನಾಡು ಲಯನ್ಸ್  ಕ್ಲಬ್ ಇನ್ಸ್ಪೈರ್ ನ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಅಧ್ಯಕ್ಷ ಸುಧೀರ್ ಬಾಳಿಗ, ಸದಸ್ಯರಾದ ಭಾಸ್ಕರ್ ಕಾಂಚನ್, ಉದ್ಯಮಿ ಸಾಧಿಕ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕ ಪುನೀತ್ ಕೃಷ್ಣ, ಗುರುಪ್ರಸಾದ್ ಭಟ್ ಮುಂಡ್ಕೂರು ಮತ್ತಿತರರು ಉಪಸ್ಥಿತರಿದ್ದರು

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807