ಕುಪ್ಪೆಪದವು, ಮುತ್ತೂರು ವಲಯ ಕಾಂಗ್ರೆಸ್ ಸಭೆ
Wednesday, March 18, 2026
ಮಂಗಳೂರು:ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕುಪ್ಪೆಪದವು ಹಾಗೂ ಮುತ್ತೂರು ವಲಯ ಕಾಂಗ್ರೆಸ್ ಸಭೆಯು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆಪಿಸಿಸಿ ವಕ್ತಾರ ಮುಹಮ್ಮದ್ ಬಡಗನ್ನೂರು ಎಸ್ಐಆರ್ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಗಿರೀಶ್ ಆಳ್ವ, ರಾಮಚಂದ್ರ ಸಾಲ್ಯಾನ್, ಡಿ.ಪಿ.ಹಮ್ಮಬ್ಬ, ಹರಿಯಪ್ಪ, ಅಬೂಬಕ್ಕರ್ ಕಲ್ಲಾಡಿ, ಚಂದ್ರಹಾಸ ಶೆಟ್ಟಿ, ಅಬ್ದುಲ್ ರಝಾಕ್, ದಯಾನಂದ ಶೆಟ್ಟಿ, ಉದಯ ಕಂಬಳಿ, ಹಮೀದ್ ಮುತ್ತೂರು, ರೊನಾಲ್ಡ್ ಅಡ್ಯಾರ್, ಅಝೀಝ್, ಅಬ್ದುಲ್ ರಹಮಾನ್, ಶರೀಫ್, ಲತೀಫ್, ರವಿ ಕೊಳವೂರು, ಮುಸ್ತಫಾ, ನವೀನ್ ಪೂಜಾರಿ, ಹಸನ್ ಕಪ್ಪೆಪದವು ಹಾಗೂ ಇನ್ನಿತರರು ಉಪಸ್ಥಿತರಿದ್ದರು.