Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಶ್ರಮದಾನ

ಬಜಪೆ: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮಹಿಳಾ ನಾಯಕಿ, ಕಂದಾವರ ಗ್ರಾ ಪಂ ನ  ಮಾಜಿ ಅಧ್ಯಕ್ಷೆ  ವಿಜಯ ಗೋಪಾಲ ಸುವರ್ಣ ರವರ ನೇತೃತ್ವದಲ್ಲಿ ಬಜಪೆ ಸಮೀಪದ  ಮುರ ನಗರದ ಅರಸು ವೃತ್ತದ ಸಮೀಪ ಹೊಂಡಗಳಿಂದ  ಹದಗೆಟ್ಟ ರಸ್ತೆಗೆ  ಶ್ರಮದಾನದ ಮೂಲಕ  ತಾತ್ಕಲೀಕವಾಗಿ ಹೊಂಡಗಳನ್ನು ಕಲ್ಲು  ಮಣ್ಣುಗಳನ್ನು ಹಾಕಿ ಮುಚ್ಚಿದರು. ಶ್ರಮದಾನಕ್ಕೆ ಮುರ ನಗರದ ಆಟೋ ಚಾಲಕ -ಮಾಲಕರು ಹಾಗೂ  ಮುರ ನಗರದ ನಾಗರಿಕರು ಸಾಥ್ ನೀಡಿದರು .

 ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ  ಸದಸ್ಯ ನಿಸಾರ್ ಕರಾವಳಿ , ಎಸ್ ಡಿ ಪಿ ಐ ಕೊಳಂಬೆ ಭಾಗದ ಅಧ್ಯಕ್ಷ  ಹಮೀದ್ ಕೊಳಂಬೆ,ಕಂದಾವರ ಗ್ರಾ ಪಂ ಮಾಜಿ ಸದಸ್ಯರಾದ ಶರ್ಮಿಳಾ,ಅಶ್ರಫ್ ,ಹಾಲಿ ರುಕಯ್ಯ್ ಕಿಶೋರ್,  ಸಂತು ,ಹಫೀಜ್ ಕೊಳಂಬೆ, ಚೆರಿಯೋಣಕ್ ಅಝರ್ ಚೆಯ್ಯ್ ಮತ್ತು ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.