ಭಾಗ್ಯಲಕ್ಷ್ಮಿ ಯೋಜನೆ, ಯೋಜನೆಯ ಮಹತ್ವ ಮತ್ತು ಔಚಿತ್ಯತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು 18 ವರ್ಷದ ಹಿಂದೆ ಜಾರಿಗೆ ತಂದಿದ್ದ ಭವಿಷ್ಯದ ಭದ್ರಬುನಾದಿಯ ಮಹತ್ವಕಾಂಕ್ಷಿ ಕಾರ್ಯಕ್ರಮ ಭಾಗ್ಯಲಕ್ಷ್ಮಿ ಯೋಜನೆಗಳ ಫಲಾನುಭವಿಗಳೊಂದಿಗೆ (ಭಾಗ್ಯಲಕ್ಷ್ಮಿ ಬಾಂಡ್ ಮೆಚೂರ್ ಆದ ) ಬೆಳ್ಳಾಯರು ಗ್ರಾಮದ ಅಂಗನವಾಡಿಯಲ್ಲಿ ಪೋಷಕರು ಮತ್ತು ಫಲಾನುಭವಿ ವಿದ್ಯಾರ್ಥಿನಿಗಳೊಂದಿಗೆ ಯೋಜನೆಯ ಮಹತ್ವ ಮತ್ತು ಔಚಿತ್ಯತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು .