Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಹೆದ್ದಾರಿಯಲ್ಲಿನ ಹೊಂಡಗಳಿಗೆ ಮುಕ್ತಿ,ಬಜಪೆಯ ಕರಾವಳಿ ಟೀಮ್ ನಿಂದ ಶ್ರಮದಾನ

ಬಜಪೆ:ಕಟೀಲು - ಮಂಗಳೂರು ರಾಜ್ಯ ಹೆದ್ದಾರಿ 67 ರ ಬಜಪೆ  ರಾಜ್ಯ ಹೆದ್ದಾರಿಯಲ್ಲಿ  ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು,ಆಪಾಯಕಾರಿಯಾಗಿ ಪರಿಣಮಿಸಿದೆ.ಹೆದ್ದಾರಿಯಲ್ಲಿ ವಾಹನಗಳ ಸವಾರರು ಹರಸಾಹಸಪಟ್ಟು  ಸಂಚರಿಸುವ ಕಷ್ಟವನ್ನು  ಅರಿತ  ಬಜಪೆಯ ಕರಾವಳಿ ಟೀಮ್ ನ ಅಧ್ಯಕ್ಷ ನಿಸಾರ್ ಕರಾವಳಿ ,ಕರಾವಳಿ ಅಜ್ಮಲ್ ಕೊಳಂಬೆ ಹಾಗೂ ಹಫೀಜ್  ಕೊಳಂಬೆ ನೇತೃತ್ವದಲ್ಲಿ ಬಜಪೆ ರಾಜ್ಯ ಹೆದ್ದಾರಿಯ ಸೃಷ್ಟಿ ಹೋಟೆಲ್  ಮುಂಭಾಗದಲ್ಲಿ ಹೊಂಡಗಳಿಂದ ಹದಗೆಟ್ಟ ರಾಜ್ಯ ಹೆದ್ದಾರಿಯನ್ನು ಶ್ರಮದಾನದ ಮೂಲಕ ಹೊಂಡಗಳನ್ನು  ತಾತ್ಕಲೀಕವಾಗಿ ಮುಚ್ಚಿದರು.
ಈ ಸಂದರ್ಭ ಕರಾವಳಿ ಟೀಮ್ ನ ಜಲಾಲ್ ಮರವೂರು,ಅಸ್ಪಕ್ ಪ್ಯಾರ,ನಾಗೇಶ ಬಜ್ಪೆ,ಖಾದರ್ ಕಿನ್ನಿಪದವು,ಜುನೈದ್ ಬಜ್ಪೆ,ಸಹದ್ ಹಾಗೂ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.