ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಯುವ ಸಂಗಮ (ರಿ)ಎಕ್ಕಾರು,ಸಹಾಯ ಹಸ್ತ
ಬಜಪೆ:ಕಡು ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಶ್ರೀಮತಿ ಸುಶೀಲ ಮಡಿವಾಳ ಎಂಬವರ ಮನೆ ಬೆಂಕಿಗಾಹುತಿಯಾಗಿ ಸುಟ್ಟು ಹೋಗಿದ್ದು,ಮಾಹಿತಿಯನ್ನು ಅರಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವಿಜಯ ಯುವ ಸಂಗಮ (ರಿ)ಎಕ್ಕಾರು ಇದರ ಸರ್ವಸದಸ್ಯರ ಸಹಕಾರದಲ್ಲಿ ಶ್ರೀಮತಿ ಸುಶೀಲ ಮಡಿವಾಳ ಅವರಿಗೆ ರೂ.30000 ಮೊತ್ತದ ಚೆಕ್ಕ್ ನ್ನು ಹಸ್ತಾಂತರಿಸಿದರು.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಎಕ್ಕಾರಿನ ವಿಜಯ ಯುವ ಸಂಗಮವು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿದೆ.ಸಂಕಷ್ಟದಲ್ಲಿರುವ ಬಡಜನರ ಕಣ್ಣಿರನ್ನು ಒರೆಸುವ ಕಾರ್ಯದೊಂದಿಗೆ ಶೈಕ್ಷಣಿಕ,ವೈದ್ಯಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿಯೂ ಬಡಜನರಿಗೆ ಸಹಾಯಹಸ್ತವನ್ನು ನೀಡುತ್ತ ಬಂದಿದೆ.ಇಂತಹ ಉತ್ತಮ ಸಮಾಜಮುಖಿ ಕಾರ್ಯಗಳಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವಸದಸ್ಯರ ಸಹಕಾರವೂ ಇದೆ.ಗ್ರಾಮೀಣ ಭಾಗದಲ್ಲಿನ ವಿಜಯ ಯುವ ಸಂಗಮ ಸಂಸ್ಥೆಯು ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬರಲಿ ಎಂಬುದು ನಮ್ಮೇಲರ ಆಶಯ.