Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನವಜೋಡಿಗೆ ಶುಭಹಾರೈಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಕಾಂಗ್ರೆಸ್ ಮುಖಂಡ  ಹಾಗೂ ಎಕ್ಕಾರು ಕಾಂಗ್ರೆಸ್ ಪ್ರಜಾಪ್ರತಿನಿಧಿ ಸಮಿತಿಯ ಅಧ್ಯಕ್ಷ  ಮೋನಪ್ಪ ಶೆಟ್ಟಿ ಎಕ್ಕಾರು  ಅವರ ಸುಪುತ್ರಿ ಚೈತ್ರಾ ಅವರ ವಿವಾಹ ಸಮಾರಂಭವು ಎಕ್ಕಾರಿನ ಬಂಟರಭವನದಲ್ಲಿ ನಡೆಯಿತು.ವಿವಾಹ ಸಮಾರಂಭದಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್  ಗುಂಡೂರಾವ್  ಅವರು ಪಾಲ್ಗೊಂಡು  ನವಜೋಡಿಯ ದಾಂಪತ್ಯ ಜೀವನ ಸಂತೋಷ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭಹಾರೈಸಿದರು.ಈ ಸಂದರ್ಭ ಸ್ಥಳೀಯ ಕಾಂಗ್ರೆಸ್ ಮುಖಂಡರುಗಳು ಇದ್ದರು.