Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ ಶ್ರೀನಾರಾಯಣಗುರು ವಿದ್ಯಾಸಂಸ್ಥೆಯಲ್ಲಿ ವಿಶ್ವಪರಿಸರ ದಿನಾಚರಣೆ

ಮೂಲ್ಕಿ:ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ವನ್ನು ತಡೆಗಟ್ಟುವ ಧ್ಯೇಯ ವಾಕ್ಯ" ದೊಂದಿಗೆ  ಮೂಲ್ಕಿಯ  ಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್"ಗುರುಜ್ಯೋತಿ" ವಿಭಾಗದ ಸ್ಕೌಟ್ ಗೈಡ್ ರೋವರ್ ರೇಂಜರ್ ತಂಡ ದಿಂದ  ವಿಶ್ವ ಪರಿಸರದಿನವನ್ನು ಆಚರಿಸಲಾಯಿತು.  ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ  ಭಾಸ್ಕರ್ ಸಾಲ್ಯಾನ್  ಅವರು  ವಿದ್ಯಾರ್ಥಿ ಗಳಿಗೆ ನೀಡುವ ಮೂಲಕ ಆಚರಿಸಲಾಯಿತು. ಪರಿಸರ ದಿನಾಚರಣೆ ಗೆ ಸಂಬಂಧ ಪಟ್ಟ ಪ್ರಬಂಧ ಮತ್ತು ಚಿತ್ರ ಕಲೆಯಲ್ಲಿ ಪ್ರಥಮ  ಹಾಗೂ ದ್ವಿತೀಯ ಸ್ಥಾನವನ್ನು ಪಡೆದ  ಗೈಡ್ಸ್ ವಿದ್ಯಾರ್ಥಿಗಳಿಗೆ ಶಾಲಾ ಸಂಚಾಲಕ  ಹರೀ0ದ್ರ ಸುವರ್ಣ ಅವರು  ಬಹುಮಾನಗಳನ್ನು  ನೀಡಿದರು. 

ಈ ಸಂದರ್ಭ  ಹೇಮರಾಜ್, ಯೋಗೀಶ್ ಕೋಟ್ಯಾನ್ , ಶ್ರೀಮತಿ ಮಂಜುಳಾ ,ಎಲ್ಲ ದಳಗಳ  ನಾಯಕರು  ಹಾಗೂ  ಶಿಕ್ಷಕ ವೃಂದದವರು  ಉಪಸ್ಥಿತರಿದ್ದರು. ಶಾಲಾ ಪ್ರಾ0ಶುಪಾಲ  ಯತೀಶ್ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ಸ್ಕೌಟ್ಸ್  ಗೈಡ್ ಮಕ್ಕಳಿಂದ ಪರಿಸರ ಗೀತೆ ಯನ್ನು ಹಾಡಿಸಿ ಗಿಡ ನಡೆಸಿ ಕಾರ್ಯಕ್ರಮವನ್ನು ಸಮಾಪ್ತಿ ಗೊಳಿಸಲಾಯಿತು.