-->
 ಶಾಸಕ ಡಾ.ಭರತ್ ಶೆಟ್ಟಿಯವರನ್ನು ಭೇಟಿ ಮಾಡಿದ ಕುಪ್ಪೆಪದವು ಗ್ರಾ.ಪಂ ನ ನಿಯೋಗ

ಶಾಸಕ ಡಾ.ಭರತ್ ಶೆಟ್ಟಿಯವರನ್ನು ಭೇಟಿ ಮಾಡಿದ ಕುಪ್ಪೆಪದವು ಗ್ರಾ.ಪಂ ನ ನಿಯೋಗ

ಮಂಗಳೂರು:ಕುಪ್ಪೆಪದವು ಗ್ರಾಮ ಪಂಚಾಯತ್ ನ  ಅಧ್ಯಕ್ಷೆ ಶ್ರೀಮತಿ ವಿಮಲ ಗಿರಿಧರ್ , ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ  ನಿಯೋಗವು ಇಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿಯವರನ್ನು  ಭೇಟಿ ಮಾಡಿ ಗ್ರಾಮ ಪಂಚಾಯತಿಗೆ ಒಳಪಟ್ಟ ನಿವೇಶನ ರಹಿತ ಫಲಾನುಭವಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. 

 ಶಾಸಕ ಡಾ.ಭರತ್ ಶೆಟ್ಟಿ ಅವರು  ತಾಂತ್ರಿಕ ಸಮಸ್ಯೆಗಳನ್ನು  ವಿವರಿಸಿ ಗ್ರಾಮ ಪಂಚಾಯತಿನ ಮುಂದಿನ ಕಾರ್ಯ ಯೋಜನೆಗಳಿಗೆ ಬೆಂಬಲಿಸುವುದಾಗಿ ಹಾಗೂ ಸೂಕ್ತ ಅನುದಾನಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.ಪಂಚಾಯತಿ ಗೊತ್ತುಪಡಿಸಿದ ಮನೆ ನಿವೇಶನದ ಜಾಗವನ್ನು ಕುದ್ದು ತಾನೇ ಪರಿಶೀಲಿಸಿ ಫಲಾನುಭವಿಗಳೊಂದಿಗೆ  ಮಾತುಕತೆ ನಡೆಸುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಶ್ರೀಮತಿ ವಿಮಲಾ ಗಿರಿಧರ್, ಉಪಾಧ್ಯಕ್ಷ ಮಹಮ್ಮದ್ ಶರೀಫ್ ಕಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಕುಮಾರಿ ಸವಿತಾ ಮಂದೋಲಿಕರ, ಲೆಕ್ಕ ಸಹಾಯಕ ಇಸ್ಮಾಯಿಲ್ ಸಬ್ ಎಂ.ಸ್, ಸದಸ್ಯರುಗಳಾದ ನಿತೇಶ್ ದೊಡ್ಡಲಿಕೆ, ರಫೀಕ್ ಅಚಾರಿಜೋರ, ವಿಜಯ ಕಲ್ಲಾಡಿ ಹಾಗೂ  ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ