
ಜೂ. 1 ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ಆಶ್ರಯದಲ್ಲಿ ಕಲಾವಿದರಿಗೆ ಉಚಿತ ಅಪಘಾತ ವಿಮಾ ಯೋಜನೆ
Wednesday, May 28, 2025
ಮಂಗಳೂರು:ಜೂ.1 ರ ಭಾನುವಾರದಂದು ಬೆಳಗ್ಗೆ 8.30 ರಿಂದ ಸಂಜೆ ಗಂಟೆ 5 ರ ತನಕ ಮಂಗಳೂರಿನ ಅಡ್ಯಾರಿನ "ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಯಕ್ಷಧ್ರುವ ಪಟ್ಲ ದಶಮ ಸಂಭ್ರಮದಲ್ಲಿ ಯಕ್ಷಗಾನ, ರಂಗಭೂಮಿ, ದೈವಾರಾಧನೆ, ಕಂಬಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರಿಗೆ/ಬಂಧುಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ನಿನ ವತಿಯಿಂದ ಉಚಿತ ವಿಮಾ ಯೋಜನೆಯನ್ನು ಆಯೋಜಿಸಲಾಗಿದೆ. ಈ ಯೋಜನೆಯಡಿಯಲ್ಲಿ ಸಂಪೂರ್ಣ ವಿಮ ಪ್ರೀಮಿಯಂ ಮೊತ್ತವನ್ನು ಪಟ್ಲ ಟ್ರಸ್ಟಿನ ವತಿಯಿಂದ ಪಾವತಿಸಲಾಗುವುದು. ಆಧಾರ್ ಕಾರ್ಡ್, ನಾಮಿನಿಯ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡಿನಲ್ಲಿ ನೋಂದಾಯಿಸಲ್ಪಟ್ಟ ನಂಬರಿನ ಮೊಬೈಲ್ ಫೋನಿನೊಂದಿಗೆ ಆಗಮಿಸಿ ಅಡ್ಯಾರ್ ಗಾರ್ಡನಲ್ಲಿ ವ್ಯವಸ್ಥೆ ಮಾಡಿರುವ ವಿಮಾ ಕೌಂಟರ್ ನಲ್ಲಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ . ವಯೋಮಿತಿ 18 ವರ್ಷದಿಂದ 65 ವರ್ಷಗಳ ತನಕ.
ಹೆಚ್ಚಿನ ಮಾಹಿತಿಗಾಗಿ ಶ್ರೀ ಸಂಜಯ ರಾವ್ 9845687066 ಇವರನ್ನು ಸಂಪರ್ಕಿಸಬಹುದಾಗಿದೆ.