Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆ

ಮೂಲ್ಕಿ:ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರವಹಿಸಿ ಎರಡು ವರ್ಷ ಸಮೀಪಿಸುತ್ತಿದೆ ಈಗಾಗಲೇ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ನಡೆಯುತ್ತದೆ.ಹಲವಾರು ಕಾರ್ಯಕರ್ತರಿಗೆ ಸರಕಾರದ ವಿವಿಧ ಸಮಿತಿಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಕಾಂಗ್ರೆಸ್ ಪಕ್ಷ ನೀಡಿದೆ ಇನ್ನೂ ಹಲವಾರು ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ದಿನ ದೂರವಿಲ್ಲ ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತ ದಿನದ ಒಂದು ಗಂಟೆ ಪಕ್ಷ ಸಂಘಟನೆಗೆ ಮೀಸಲಾಡಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಥುನ್  ಎಂ. ರೈ  ಹೇಳಿದರು.ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮೂಲ್ಕಿ ಬ್ಲಾಕ್  ಕಾಂಗ್ರೆಸ್ ನ ಅಧ್ಯಕ್ಷ ಮೋಹನ್  ಕೋಟ್ಯಾನ್ ಅವರು ಸಭೆಯ ಅಧ್ಯಕ್ಷತೆಯನ್ನು  ವಹಿಸಿದ್ದರು.
ಈ ಸಂದರ್ಭ  ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಕಿನ್ನಿಗೋಳಿ, ನಾಯಕರುಗಳಾದ ಮೋನಪ್ಪ ಶೆಟ್ಟಿ ಎಕ್ಕಾರು, ಹಸನಬ್ಬ ಬಾಳ, ಸಾಹುಲ್ ಹಮೀದ್ ಬಜ್ಪೆ, ಜಾಕ್ಸನ್ ಡಿಸೋಜ ಗೀತಾ ಶೆಟ್ಟಿ ಹಾಗೂ  ಮೊದಲಾದವರು ಉಪಸ್ಥಿತರಿದ್ದರು. 


ಕೆಪಿಸಿಸಿ ಸದಸ್ಯ  ಎಚ್  .ವಸಂತ್ ಬೆರ್ನಾರ್ಡ್   ಸ್ವಾಗತಿಸಿದರು. ಉಲ್ಲಾಸ್ ಶೆಟ್ಟಿ  ಧನ್ಯವಾದವಿತ್ತರು. 

ಮಂಜುನಾಥ ಕಂಬಾರ ಕಾರ್ಯಕ್ರಮ ನಿರೂಪಿಸಿದರು.