ಗುರುಪುರ ಶ್ರೀ ಸದಾಶಿವ ದೇವವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಅಡಪ ಆಯ್ಕೆ
Saturday, March 22, 2025
ಕೈಕಂಬ : ಗುರುಪುರ ಕೊಳದಬದಿಯ ಶ್ರೀ ಸದಾಶಿವ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾಲಕೃಷ್ಣ ಅಡಪ ಬಡಕರೆಗುತ್ತು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಅರ್ಚಕರಾಗಿ ಜಿ. ಕೆ. ಚಂದ್ರಶೇಖರ ಭಟ್ ಆಯ್ಕೆಯಾಗಿದ್ದರೆ, ಸಮಿತಿಯ ಸದಸ್ಯರಾಗಿ ದೋಣಿಂಜೆಗುತ್ತು ಶೇಖರ ಶೆಟ್ಟಿ, ಕಲ್ಲಕಲೆಂಬಿ ಹರೀಶ್ ಶೆಟ್ಟಿ, ಜಯರಾಜ್ ನಡುಗುಡ್ಡೆ, ಉಷಾ ಚಿಲಿಂಬಿಗುಡ್ಡೆ, ಯಶೋದಾ ಕಲ್ಲಕಲೆಂಬಿ, ಜಗದೀಶ್ ಪೂಜಾರಿ ಬಡಕರೆ ಮತ್ತು ಮೋಹಿನಿ ಬಡಕರೆ ಅವರು ಆಯ್ಕೆಯಾಗಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿ ಗ್ರಾಮಕರಣಿಕರಾದ ಶಿಲ್ಪಾ ಅವರು ಸಮಿತಿಯ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.