ಬಳ್ಕುಂಜೆ ಕಂಬಳ ಸಮಿತಿಯ ಪೂರ್ವಭಾವಿ ಸಭೆ
Saturday, March 22, 2025
ಮೂಲ್ಕಿ : ಬಳ್ಕುಂಜೆ ಯಲ್ಲಿ ನಡೆಯುವ ಕರಿಯ ದೇಸಿಂಗ ರಾಯ - ಬೊಳಿಯ ದೇಸಿಂಗರಾಯ ಜೋಡುಕರೆ ಕಂಬಳವು ಮಹಿಳಾ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ತುಳುನಾಡಿನ ಸಂಸ್ಕೃತಿಯನ್ನು ಉಳಿಸುವ ಪಾವಿತ್ರತೆ ಕಂಬಳ ಕ್ಷೇತ್ರದಲ್ಲಿದೆ. ಈ ಬಾರಿಯ ಕಂಬಳವನ್ನು ತಾವೆಲ್ಲರೂ ಯಶಸ್ವಿಗೊಳಿಸಿ ಎಂದು
ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್ ಕುಮಾರ್ ಹೆಗ್ಡೆ ಹೇಳಿದರು.
ಬಳ್ಕುಂಜೆ ಕಂಬಳ ಸಮಿತಿಯ ಅಧ್ಯಕ್ಷೆ ಬಳ್ಕುಂಜೆಗುತ್ತು ಮಲ್ಲಿಕಾ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆಯಲ್ಲಿ ಕೊಳಚೂರು ಕೊಂಡ್ಯೋಟ್ಟು ಸುಕುಮಾರ್ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ಕೊಟ್ನಾಯಗುತ್ತು, ಉಳೆಪಾಡಿ ಬಾಲಕೃಷ್ಣ ಶೆಟ್ಟಿ,
ಉಳೆಪಾಡಿ ಚಿತ್ತರಂಜನ್ ಶೆಟ್ಟಿ, ಪ್ರಭಾಕರ ಪೂಂಜಾ, ದಿವಾಕರ ಚೌಟ, ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ,
ಕವತ್ತಾರು ಶರತ್ ಅಜಿಲ,
ಕೃಷ್ಣ ಶೆಟ್ಟಿ, ಪ್ರಕಾಶ್ ಶೆಟ್ಟಿ,
ಪ್ರಸಾದ್ ಶೆಟ್ಟಿ, ಲಾನ್ಸಿ ಡಿ ಸೋಜಾ, ಪ್ರಸಾದ್ ಶೆಟ್ಟಿ,
ರಂಜನ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಗಣೇಶ್ ಶೆಟ್ಟಿ ಇನ್ನಾ, ನೆಲ್ಸನ್ ಲೋಬೋ,
ಮತ್ತಿತರರು ಉಪಸ್ಥಿತರಿದ್ದರು.
ಮುಂಡ್ಕೂರು ದೊಡ್ಡಮನೆ ಶರತ್ ಶೆಟ್ಟಿ ಸ್ವಾಗತಿಸಿದರು.
ದಿನಕರ ಶೆಟ್ಟಿ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು.