-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕರೆ

ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕರೆ


ಮೂಲ್ಕಿ : ಐಕಳ ಪಾಂಪೈ ಕಾಲೇಜಿನಲ್ಲಿ ಫೆ.೮ರಂದು ಶ್ರೀಧರ ಡಿ.ಎಸ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಸಮ್ಮೇಳನವನ್ನು ಯಶಸ್ಸುಗೊಳಿಸುವಂತೆ ಪಾಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಫಾ. ಓಸ್ವಾಲ್ಡ್ ಮೊಂತೆರೋ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಹೇಳಿದರು.
ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ಮಾತನಾಡಿ, ಸಮ್ಮೇಳನದಲ್ಲಿ ವಿವಿಧ ಗೋಷ್ಟಿಗಳು, ತಾಲೂಕಿನ ಗ್ರಂಥಪಾಲಕರು, ಹೆಚ್ಚು ಓದುವ ಓದುಗರಿಗೆ ಗೌರವಾರ್ಪಣೆ, ಕೃತಿಗಳ ಬಿಡುಗಡೆ, ಪುಸ್ತಕ ಇತ್ಯಾದಿ ಮಾರಾಟ ಮಳಿಗೆಗಳ ಮೂಲಕ ಆಕರ್ಷಕವಾಗಿ ಸಂಘಟಿಸಲಾಗಿದೆ. ಬಂದವರಿಗೆಲ್ಲರಿಗೂ ಪುಸ್ತಕದ ಕೊಡುಗೆ ನೀಡಲಾಗುವುದು ಎಂದರು.
ಸಮ್ಮೇಳನ ಸಮಿತಿಯ ಪ್ರಥ್ವೀರಾಜ್ ಆಚಾರ್, ಹಿಲ್ಡಾ ಡಿಸೋಜ, ಡಾ. ಪುರುಷೋತ್ತಮ ಕೆ.ವಿ, ಹೆರಿಕ್ ಪಾಯಸ್, ಸ್ವರಾಜ್ ಶೆಟ್ಟಿ, ಜೊಸ್ಸಿಪಿಂಟೋ, ರೋಹನ್ ಡಿಕೋಸ್ತ, ಧನಂಜಯ ಶೆಟ್ಟಿಗಾರ್, ಡಾ. ಯಾದವ ಸಸಿಹಿತ್ಲು, ಡಾ. ವಾಸುದೇವ ಬೆಳ್ಳೆ ಮುಂತಾದವರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ