-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಸ್ವರ್ಣ ಸಂಭ್ರಮದ ಶ್ರೀ ಗಣಪತಿ ದೇವರಿಗೆ ರಜತ ಪೀಠ ಸಮರ್ಪಣೆ

ಸ್ವರ್ಣ ಸಂಭ್ರಮದ ಶ್ರೀ ಗಣಪತಿ ದೇವರಿಗೆ ರಜತ ಪೀಠ ಸಮರ್ಪಣೆ

ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.) ಕಿನ್ನಿಗೋಳಿ ಇದರ ಸ್ವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀ ಗಣಪತಿ ದೇವರಿಗೆ ರಜತ ಪೀಠ ಸಮರ್ಪಿಸಲಾಗುತ್ತಿದೆ. 1974ರಲ್ಲಿ ಪ್ರಾರಂಭಗೊಂಡ ಕಿನ್ನಿಗೋಳಿಯ ಹೆಮ್ಮೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ಈ ಬಾರಿ 50ರ ಸಂಭ್ರಮ. ಈ ಸಂಭ್ರಮವನ್ನು ಸ್ಮರಣೀಯವಾಗಿಸಲು ಶ್ರೀ ವಿನಾಯಕನಿಗೆ ರಜತಪೀಠ ರಚನೆಯ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಸುಮಾರು 8-10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರಜತಪೀಠದ ರಚನೆಗೆ ಅನಿವಾಸಿ ಭಾರತೀಯ ಧನಂಜಯ ಶೆಟ್ಟಿಗಾರ್‌ ಸಂಚಾಲಕತ್ವದಲ್ಲಿ ನಿರ್ಮಾಣಗೊಳ್ಳುತ್ತಿದೆ.
ದುಬೈ ಸಮಿತಿಯ ಧನಂಜಯ ಶೆಟ್ಟಿಗಾರ್‌, ರಮೇಶ್‌ ಶೆಟ್ಟಿಗಾರ್‌, ಆನಂದ ಸಾಲ್ಯಾನ್‌ ನೇತೃತ್ವದಲ್ಲಿ, ಕುಶಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ, ಕೆ. ಭುವನಾಭಿರಾಮ ಉಡುಪ ಗೌರವಾಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರ ಸಹಕಾರದೊಂದಿಗೆ ಈ ರಜತ ಪೀಠ ನಿರ್ಮಾಣಗೊಂಡಿದೆ. ಗಣೇಶೋತ್ಸವದ ದಿನ ಈ ರಜತ ಪೀಠ ಸಮರ್ಪಣೆಯಾಗಲಿದೆ ಎಂದು ಸಮಿತಿ ಸದಸ್ಯರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ