Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ತೋಕೂರು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 126 ರ ಅಧ್ಯಕ್ಷರಾಗಿ ವಿನೋದ್ ಕುಮಾರ್ ತೋಕೂರು

ಕಿನ್ನಿಗೋಳಿ:ಭಾರತೀಯ ಜನತಾ ಪಾರ್ಟಿ ಮೂಲ್ಕಿ ಮೂಡಬಿದ್ರೆ ಮಂಡಲದ ಹಳೆಯಂಗಡಿ ಮಹಾಶಕ್ತಿ ಕೇಂದ್ರದ ತೋಕೂರು ಶಕ್ತಿ ಕೇಂದ್ರದ ಬೂತ್  ಸಂಖ್ಯೆ 126 ಇದರ ಬೂತ್ ಸಮಿತಿಯ ನೂತನ ಅಧ್ಯಕ್ಷರು,ಕಾರ್ಯದರ್ಶಿ ಹಾಗೂ   ಪದಾಧಿಕಾರಿಗಳ ಅಯ್ಕೆಯು ಇಂದು ಶ್ರೀ ನಾಗಶಯನವರ ಮನೆಯಲ್ಲಿ ನಡೆಯಿತು.
ಬೂತ್ ಅಧ್ಯಕ್ಷರಾಗಿ ವಿನೋದ್ ಕುಮಾರ್ ತೋಕೂರು , ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ದೇವಾಡಿಗ ಹಾಗೂ  ಪದಾಧಿಕಾರಿಗಳ ಆಯ್ಕೆಯು  ನಡೆಯಿತು. ಈ ಸಂದರ್ಭದಲ್ಲಿ ಬೂತ್ ಸಮಿತಿ  ಪ್ರಭಾರಿ
 ಕೇಶವ ಕರ್ಕೆರ , ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ  ಶ್ರೀಮತಿ ಕಸ್ತೂರಿ ಪಂಜ ,ಶಕ್ತಿ ಕೇಂದ್ರ ಪ್ರಮುಖರಾದ  ಲೋಹಿತ್ ಕೋಟ್ಯಾನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ  ಹೇಮಂತ್ ಅಮೀನ್, ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್, ಬೂತ್ ಸಮಿತಿ ಅಧ್ಯಕ್ಷ  ನಾಗಶಯನ, ಕಾರ್ಯದರ್ಶಿ ಸುನಿಲ್ ತೋಕೂರು ಹಾಗೂ ಭಾ,ಜ,ಪ ದ ಕಾರ್ಯಕರ್ತರು ಉಪಸ್ಥಿತರಿದ್ದರು.