-->


ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕ ಕಾಲು ಜಾರಿ ಬಿದ್ದು ಪ್ರಯಾಣಿಕ ಸಾವು

ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕ ಕಾಲು ಜಾರಿ ಬಿದ್ದು ಪ್ರಯಾಣಿಕ ಸಾವು

 
ಮುಲ್ಕಿ: ಇಲ್ಲಿನ ಕೊಲಕಾಡಿ ರೈಲ್ವೇ ಗೇಟ್ ಬಳಿ ಚಲಿಸುತ್ತಿದ್ದ ರೈಲಿನಿಂದ ಪ್ರಯಾಣಿಕರೊಬ್ಬರು ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿದ್ದಾರೆ. 
ಮೃತ ಯುವಕನನ್ನು ಉತ್ತರ ಪ್ರದೇಶ ಕನೋಜ್ ಜಿಲ್ಲೆಯ ರೊಹಿಲಾ ನಿವಾಸಿ ಸ್ವದೇಶ್ ಅಲಿಯಾಸ್ ಸುದ್ದನ್ ಸಿಂಗ್ (21) ಎಂದು ಗುರುತಿಸಲಾಗಿದೆ. 
ಮೃತ ಸ್ವದೇಶ್ ಕೃಷಿ ಕೆಲಸ ಮಾಡುತ್ತಿದ್ದು ತನ್ನ ಸ್ನೇಹಿತರೊಂದಿಗೆ ಕೇರಳದ ಕಾಸರಗೋಡು ಜಿಲ್ಲೆಯ ಕಣ್ಣೂರಿಗೆ ಕೂಲಿ ಕೆಲಸಕ್ಕೆ ಎಂದು   ಉತ್ತರ ಪ್ರದೇಶದ ಮಥುರಾ ದಿಂದ ನಿಜಾಮುದ್ದೀನ್ ಎಕ್ಸ್ಪ್ರೆಸ್‌ನಲ್ಲಿ ಆಗಸ್ಟ್ 23 ರಂದು ಹೊರಟಿದ್ದು ಅಗಸ್ಟ್ 25ರ ಮುಂಜಾನೆ ಮುಲ್ಕಿ ಸಮೀಪದ ಕೊಲಕಾಡಿ ರೈಲ್ವೇ ಗೇಟ್ ಬಳಿ ಸ್ವದೇಶ್ ರೈಲಿನ ಬಾಗಿಲು ಬಳಿ ಕಿವಿಗೆ ಹೆಡ್ ಫೋನ್ ಇರಿಸಿಕೊಂಡು ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ  ರೈಲು ಹಳಿ ಮೇಲೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.
ವಿಕ್ರಂ ಸಿಂಗ್ ಎಂಬಾತ ನೀಡಿದ ದೂರಿನಂತೆ ಮುಲ್ಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article