Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

ಹಳೆಯಂಗಡಿ  :ಪಡುಪಣಂಬೂರು ಗ್ರಾಮ ಪಂಚಾಯತ್‌ ಹಾಗೂ ಪ್ರಸಾದ್‌ ನೇತ್ರಾಲಯ ಸೂಪರ್‌ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ನೇತ್ರಜ್ಯೋತಿ ಚಾರಿಟೇಬಲ್‌ ಟ್ರಸ್ಟ್‌ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು. ಡಾ.ಪಿ ದಯಾನಂದ ಪೈ ಮತ್ತು ಸತೀಶ್‌ ಪೈ ಚಾರಿಟೇಬಲ್‌ ಟ್ರಸ್ಟ್‌ (ರಿ) ಸೆಂಚುರಿ ಗ್ರೂಪ್‌ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಕ್ಕೆ”  ಪಡುಪಣಂಬೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ  ಶ್ರೀಮತಿ ಕುಸುಮ ಚಂದ್ರಶೇಖರ್‌ ಅವರು  ಉದ್ಘಾಟಿಸಿದರು.ಈ ಸಂದರ್ಭ  ಪಂಚಾಯತ್‌ ಉಪಾಧ್ಯಕ್ಷ  ಹೇಮನಾಥ ಅಮೀನ್‌,  ಸದಸ್ಯರಾದ  ಮೋಹನದಾಸ್‌,ವಿನೋದ್‌ ಎಸ್‌ ಸಾಲ್ಯಾನ್‌, ಶ್ರೀಮತಿ ಪ್ರಮೀಳಾ ಡಿ ಶೆಟ್ಟಿ, ದಿನೇಶ್‌ ಶೆಟ್ಟಿ, ಶ್ರೀಮತಿ ನಮಿತಾ, ಶ್ರೀಮತಿ ವಿಜಯಲಕ್ಷ್ಮೀ, ಪಂಚಾಯತ್‌ ಕಾರ್ಯದರ್ಶಿ  ಸುಜಾತ ಎಚ್.‌, ಪ್ರಸಾದ್‌ ನೇತ್ರಾಲಯದ  ನೇತ್ರ ತಜ್ಞ ಡಾ: ಲಕ್ಷ್ಮೀ.  ಸಮುದಾಯ ಆರೋಗ್ಯ ಅಧಿಕಾರಿ ಕೋಮಲ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ  ಗೀತಾ ಗಣೇಶ್‌ ಹಾಗೂ ಸದಸ್ಯರು,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು
ಉಪಸ್ಥಿತರಿದ್ದರು.