-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಾರ್ಗಿಲ್  ಯುದ್ದದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಕೆ

ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಕೆ


ಕಿನ್ನಿಗೋಳಿ:ಕಾರ್ಗಿಲ್ ಯುದ್ದಕ್ಕಾಗಿ ಹಲವು ಯೋಧರು ಬಲಿದಾನ ಮಾ ಡಿದ್ದಾರೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರು ಶಾಂತಪ್ಪ ಹೇಳಿದರು ಅವರು ಮೂಲ್ಕಿ ತಾಲೂಕು ಪಂಚಾಯತ್ ಕಚೇರಿ ಸಬಾಭವನದಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಿ ಮಾತನಾಡಿದರು.ನಾನು ಮಾಜಿ ಸೈನಿಕನಾಗಿದ್ದು ಕಾರ್ಗಿಲ್ ಯುದ್ದ ಆಗುವ ಸಂದರ್ಭ ನಾನೂ ಕೂಡ ಸೈನ್ಯದಲ್ಲಿದ್ದೆ, ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ಮತ್ತು ಜಾರ್ಜ್ ಪೆರ್ನಾಂಡೀಸ್ ಅವರ ಸರಿಯಾದ ನಿರ್ದಾರದಿಂದ ಯುದ್ದ ಗೆಲ್ಲಲು ಸಾದ್ಯವಾಯಿತು,  ಆದರೆ ಪಾಕಿಸ್ಥಾನ ತನ್ನ ಬುದ್ದಿಯನ್ನು ಬಿಡಲಿಲ್ಲ ಎಂದರು,  ಈ ಸಂದರ್ಭ ನಿವೃತ್ತ ಸೈನಿಕರಾದ  ಕಾರ್ಯನಿರ್ವಹಣಾಧಿಕಾರಿಯವರನ್ನು ಪಂಚಾಯತ್ ವತಿಯಿಂದ ಗೌರವಿಸಲಾಯಿತು. ವಿವಿಧ ಪಂಚಾಯತ್ ಅಧ್ಯಕ್ಷರು, ಅಧಿಕಾರಿ ಗಳಾದ  ಯೋಗೀಶ್, ಕುಸುಮ, ಮೋಹನ್ ದಾಸ ಪಡುಪಣಂಬೂರು, ಅನೀಲ್,  ಶೈಲಜಾ, ನಾರಾಯಣ ಮೂಲ್ಯ, ಹರಿಶ್ಚಂದ್ರ, ಸಿಬಂಧಿಗಳಾದ ರೂಪ, ಮಧುರ, ರುತೇಶ್, ಮುಕೇಶ್ ಮತ್ತಿತರರು ಉಪಸ್ಥಿತರಿದ್ದರು. ಕೆಮ್ರಾಲ್ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ