-->

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಿನ್ನಿಗೋಳಿ ಘಟಕದ ಉದ್ಘಾಟನೆ

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಜೆ. ಬಿ ಫ್ರೆಂಡ್ಸ್ ಕಿನ್ನಿಗೋಳಿ ಹಾಗೂ ಕೊಡುಗೈದಾನಿಗಳಿಂದ  ಶಾಲಾ ಮಕ್ಕಳಿಗೆ , ಛತ್ರಿ ಹಾಗೂ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ

ಜೆ. ಬಿ ಫ್ರೆಂಡ್ಸ್ ಕಿನ್ನಿಗೋಳಿ ಹಾಗೂ ಕೊಡುಗೈದಾನಿಗಳಿಂದ ಶಾಲಾ ಮಕ್ಕಳಿಗೆ , ಛತ್ರಿ ಹಾಗೂ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ

ಕಿನ್ನಿಗೋಳಿ,ಜೆ. ಬಿ ಫ್ರೆಂಡ್ಸ್ ಕಿನ್ನಿಗೋಳಿ ಹಾಗೂ ಊರಿನ ಕೊಡುಗೈದಾನಿಗಳಿಂದ ಪದ್ಮನೂರು ಸರ್ಕಾರಿ ಪ್ರಾಥಮಿಕ ಶಾಲೆ  ಹಾಗೂ ಭಾರತ್ ಮಾತಾ ಶಾಲೆ ಪುನರೂರಿನ   ಶಾಲಾ ಮಕ್ಕಳಿಗೆ , ಛತ್ರಿ ಹಾಗೂ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವು ಬಾಬಾ ಕೋಡಿ ಪುನರೂರಿನ ಆದಿಶಕ್ತಿ ಶ್ರೀ ನಾಗಕನ್ನಿಕ ಕ್ಷೇತ್ರದಲ್ಲಿ  ಭಾನುವಾರದಂದು   ನಡೆಯಿತು.ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಯುಗಪುರುಷದ 
ಭುವನಾಭಿರಾಮ ಉಡುಪ  ಮಾತನಾಡಿ  ಜೆಬಿ ಪ್ರೆಂಡ್ಸ್ ಕಿನ್ನಿಗೋಳಿ ಹಾಗೂ ಊರಿನ ಕೊಡುಗೈದಾನಿಗಳ ಸಹಕಾರದೊಂದಿಗೆ ನಡೆದ ಅತ್ಯುತ್ತಮ ಕಾರ್ಯಕ್ರಮ. ಕ್ಷೇತ್ರದಲ್ಲಿ  ನಡೆದಂತಹ ಕಾರ್ಯಕ್ಕೆ ಶ್ರೀ ಆದಿಶಕ್ತಿ ದೇವಿಯ ಅನುಗ್ರಹ ಸದಾ ಇರಲಿ ಎಂದರು.
 ಕಿನ್ನಿಗೋಳಿಯ ಉದ್ಯಮಿ ,   ಪೃಥ್ವಿರಾಜ್ ಆಚಾರ್ಯ ಮಾತನಾಡಿ, ಜೆ ಬಿ ಫ್ರೆಂಡ್ಸ್ ಕ್ಲಬ್ಬಿನ ಇಂತಹ ಉತ್ತಮ ಕಾರ್ಯಕ್ಕೆ  ಸದಾ ಪ್ರೋತ್ಸಾಹವಿದೆ ಎಂದರು.  ಕಿನ್ನಿಗೋಳಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ   ಶ್ರೀಮತಿ ಹಿಲ್ಡಾ ಡಿಸೋಜ ಮಾತನಾಡಿ  ಸಮಾಜ , ಸೇವೆಯನ್ನು ಮಾಡುತ್ತಾ ಬರುತ್ತಿರುವ  ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
 ಪದ್ಮನೂರು  ಶಾಲೆಯ. ಮುಖ್ಯೋಪಾಧ್ಯಾಯನಿ  ಶ್ರೀಮತಿ ಐರಿನ್ ಫೆರ್ನಾಂಡಿಸ್ ,   ಪುನರೂರು ಭಾರತಮಾತ ಶಾಲೆಯ , ಶಿಕ್ಷಕಿ ಕು. ರಾಜಲಕ್ಷ್ಮಿ, ಜೆಬಿ ಫ್ರೆಂಡ್ಸ್  ಕ್ಲಬ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು,
ಕಾರ್ಯಕ್ರಮದಲ್ಲಿ  ಶ್ರೀ  ಶ್ರೀಆದಿಶಕ್ತಿ ಶ್ರೀ ನಾಗಕನ್ನಿಕ ಕ್ಷೇತ್ರದ ಮೇಲ್ವಿಚಾರಕ  ಶೇಷಪ್ಪ ಮಡಿವಾಳ ಹಾಗೂ ಕೊಡುಗೈದಾನಿಗಳನ್ನು ಅಭಿನಂದಿಸಲಾಯಿತು.ಕ್ಲಬ್ ನ ಅಧ್ಯಕ್ಷ ಸಂತೋಷ್ ಶೆಟ್ಟಿ ಸ್ವಾಗತಿಸಿ,ಕ್ಲಬ್ ನ ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್  ಧನ್ಯವಾದವಿತ್ತರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ