-->


ಮೂಳೂರು - ಅಡ್ಡೂರು ಜೋಡುಕರೆ  ಕಂಬಳ

ಮೂಳೂರು - ಅಡ್ಡೂರು ಜೋಡುಕರೆ ಕಂಬಳ

ಬಜಪೆ:ತುಳುನಾಡಿನ ಜಾನಪದ ಕ್ರೀಡೆ ಕಂಬಳ.ಕಂಬಳವು  ಆಚರಣೆ ,ಆರಾಧನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಆಸ್ರಣ್ಣ ಅವರು ಹೇಳಿದರು.ಅವರು ಶುಕ್ರವಾರದಂದು   ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ ನಿಂದ ಗುರುಪುರದ ಮಾಣಿಬೆಟ್ಟು ಗುತ್ತಿನ ಎದುರಿನ ಗದ್ದೆಯಲ್ಲಿ  ಮೂಳೂರು - ಅಡ್ಡೂರು ಜೋಡುಕರೆ ಕಂಬಳವನ್ನು ದೀಪ ಬೆಳಗಿಸಿ  ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.
ರವಿರಾಜ್ ಶೆಟ್ಟಿ ನಿಟ್ಟೆಗುತ್ತು ಅವರು ಕಂಬಳವನ್ನು ಉದ್ಘಾಟಿಸಿದರು.

ಗುರುಪುರ ಪೊಂಪೈ ಚರ್ಚ್ ನ ಧರ್ಮಗುರುಗಳಾದ ವಂದನೀಯ ರೊಡಾಲ್ಪ್  ರವಿ ಡೆ.ಸಾ,ಗುರುಪುರ ದಾರು ಸಾಲಾಂ  ಜುಮ್ಮಾ ಮಸ್ಜಿದ್ ನ ಖತೀಬರಾದ ಜಮಾಲ್ ದಾರ್ಮಿ ಅವರು ಶುಭ ಸಂದೇಶವನ್ನು ನೀಡಿದರು.
ಕರಾವಳಿ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲು ಗುತ್ತು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭ 
ಕಂಬಳ ಸಮಿತಿಯ ಗೌರವಾಧ್ಯಕ್ಷ ಇನಾಯತ್ ಆಲಿ ಮೂಲ್ಕಿ,ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು,ರವಿರಾಜ್ ಶೆಟ್ಟಿ ನಿಟ್ಟೆಗುತ್ತು ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ,
  ಹಾಗೂ ಮತ್ತಿತರರು ಮಾತನಾಡಿದರು.


 ಈ ಸಂದರ್ಭ ಪ್ರಮುಖರುಗಳು  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article