Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಳಕುಂಜೆ ಕರಿಯ ದೇಸಿಂಗರಾಯ - ಬೊಳಿಯ ದೇಸಿಂಗ ರಾಯ ಕಂಬಳಕ್ಕೆ ಚಾಲನೆ

ಕಿನ್ನಿಗೋಳಿ:ಬಳಕುಂಜೆ ಕೋಟ್ನಾಯಗುತ್ತು ಕರಿಯದೇಸಿಂಗ ರಾಯ ಬೊಳಿಯ ದೇಸಿಂಗರಾಯ ಕಂಬಳಕ್ಕೆ ಶನಿವಾರದಂದು ಚಾಲನೆ ನೀಡಲಾಯಿತು.
ಕೋಟ್ನಾಯಗುತ್ತು ದೈವ  ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ  ಕಂಬಳದ ಕರೆಗೆ ಕೋಣಗಳನ್ನು ಇಳಿಸುವ ಕ್ರಮ ನಡೆಯಿತು.

ಈ ವೇಳೆ ಬಪ್ಪನಾಡು ದೇವಳದ ಅನುವಂಶಿಕ ಮುಕ್ತಸರ ಮನೋಹರ ಶೆಟ್ಟಿ,  ಶಿಬರೂರು ವೇದವ್ಯಾಸ ತಂತ್ರಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ರಾಮದಾಸ್‌ ಭಟ್ ಮುಂಡೂರು, ವಿಷ್ಣು ರಾಜ್ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬಳ್ಳುಂಜೆ ಚರ್ಚ್ ಧರ್ಮಗುರು ಪೌಲ್ಸ್ ಸಿಕ್ಟೇರ  ಹಾಗೂ ಮೊದಲಾದವರು  ಉಪಸ್ಥಿತರಿದ್ದರು.