ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನಿಂದ ಬೃಹತ್ ರಕ್ತದಾನ ಶಿಬಿರ
Sunday, March 10, 2024
ಮೂಲ್ಕಿ:ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ , ಸೈಂಟ್ ಅನ್ಸ್ ನರ್ಸಿಂಗ್ ಕಾಲೇಜು, ರೆಡ್ ಕ್ರಾಸ್ ಲೇಡಿ ಗೋಷನ್ ಜಂಟಿ ಆಶ್ರಯದಲ್ಲಿ ಕಾರ್ನಾಡು ಸೈಂಟ್ ಅನ್ಸ್ ನರ್ಸಿಂಗ್ ಕಾಲೇಜು ನಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಿತು.ಈ ವೇಳೆ ಮೂಲ್ಕಿ ವಿಜಯ ಸನ್ನಿಧಿಯಿಂದ ಕಾರ್ನಾಡ್ ಚೇತನ ನರ್ಸಿಂಗ್ ಹೋಮ್ ವರೆಗೆ ರಕ್ತದಾನದ ಉಪಯೋಗದ ಬಗ್ಗೆ ಜಾಥವು ನಡೆಯಿತು.ಶಿಬಿರದಲ್ಲಿ ಡಾ. ಜೆ ಎನ್ ಭಟ್ ರಕ್ತದಾನದ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ರೆಡ್ ಕ್ರಾಸ್ ಲೇಡಿಗೋಶನ್ ಆಸ್ಪತ್ರೆಯ ಸಂಯೋಜಕ ಪ್ರವೀಣ್, ಅಧ್ಯಕ್ಷ ಸುಧೀರ್ ಬಾಳಿಗ ಕೋಶಾಧಿಕಾರಿ ಶಿವಪ್ರಸಾದ್, ವಲಯ ಅಧ್ಯಕ್ಷ ಪ್ರತಿಭಾ ಹೆಬ್ಬಾರ್ ,ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ , ಗುರುಪ್ರಸಾದ್ ನಾಯಕ್ ಅಕ್ಷತಾ ನಾಯಕ್ ಪ್ರನಮ್ ಶರ್ಮ ಹಾಗೂ ಮೊದಲಾದವರು ಉಪಸ್ಥಿತರಿದ್ದರು.ಶಿಬಿರದಲ್ಲಿ ಒಟ್ಟು 72 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು