Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ನಿವೃತ್ತ ಶಿಕ್ಷಕಿಗೆ ಅಭಿನಂದನೆ

ಕಟೀಲು :  ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದು 
ನಿವೃತ್ತರಾದ ಶ್ರೀಮತಿ ತಾರಾ ಟಿಯವರನ್ನು  ಅಭಿನಂದಿಸಲಾಯಿತು.  ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಗ್ರೆಗರಿ ಸಿಕ್ವೇರಾ, ಮುಖ್ಯೋಪಾಧ್ಯಾಯ ರಾದ ಚಂದ್ರಶೇಖರ ಭಟ್ ಮತ್ತು ಸರೋಜಿನಿಯವರು ಉಪಸ್ಥಿತರಿದ್ದರು. ಶಿಕ್ಷಕಿ ಬೇಬಿ ಸ್ವಾಗತಿಸಿದರು. ಅಕ್ಷತಾ ಶೆಟ್ಟಿ ವಂದಿಸಿದರು ಅನುಷಾ ನಿರೂಪಿಸಿದರು. ಇಂಗ್ಲಿಷ್ ಹಾಗೂ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳ  ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ಶಿಕ್ಷಕ ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು. 
ದೇಗುಲದ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣರು ‌ನಿವೃತ್ತರಿಗೆ ಶ್ರೀ ದೇವಿಯ ಶೇಷವಸ್ತ್ರ ನೀಡಿ ಗೌರವಿಸಿದರು.