ಕಟೀಲು :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ಸಂಯೋಜನೆಯಲ್ಲಿ ಸುಪ್ರಭಾತ ಸಂಗೀತ ಸೇವೆಯಾಗಿ ಕೃಷ್ಣರಾಜ ಉಳಿಯಾರು ಅವರಿಂದ ಸ್ಯಾಕ್ಸೋಫೋನ್ ವಾದನ ಕಚೇರಿ ನಡೆಯಿತು. ಧನ್ಯಶ್ರೀ ಶಬರಾಯ ಪಿಟೀಲಿನಲ್ಲಿ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಿದರು. ಜ್ಯೋತಿ ಉಡುಪ ನಿರೂಪಿಸಿದರು.