ಎಕ್ಕಾರು:ಐವೆರ್ ಸತ್ಯೊಲೆನ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ
Thursday, December 28, 2023
ಉಳ್ಳಾಯ ದೈವದ ನೇಮ , ಕಂಚಿಲು ಸೇವೆ , ಉರುಳು ಸೇವೆ ನಡೆಯಿತು.ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.
ಧಾರ್ಮಿಕ ವಿಧಿಗಳು ಎಕ್ಕಾರು ಶ್ರೀ ಗೋಪಾಲಕೃಷ್ಣ ಮಠದ ವೇದಮೂರ್ತಿ ಹರಿದಾಸ ಉಡುಪ ಹಾಗೂ ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ಗಡಿಕಾರ ತಿಮ್ಮ ಕಾವರು ( ನಿತಿನ್ ಹೆಗ್ಡೆ ಕಾವರಮನೆ ) ಅವರ ನೇತೃತ್ವದಲ್ಲಿ ಜರಗಿತು.
ನಡ್ಯೋಡಿ ಗುತ್ತು ಭಾಸ್ಕರ ಮುದ್ದ , ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ , ರಮೇಶ್ ಭಂಡಾರಿ ಮಿತ್ತೊಟ್ಟು ಬಾಳಿಕೆ ಮೇಲೆಕ್ಕಾರು , ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು , ಮುರಾ ಸದಾಶಿವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಪ್ರತಿದಿನ ಮಧ್ಯಾಹ್ನ 1ರಿಂದ ರಾತ್ರಿವರೆಗೂ ನಿರಂತರ ಅನ್ನದಾನ ನಡೆಯಲಿದೆ.