-->

ಕಿನ್ನಿಗೋಳಿಯಲ್ಲಿ ಭಾಗವತ ಪ್ರವಚನ ಉದ್ಘಾಟನೆ

ಕಿನ್ನಿಗೋಳಿಯಲ್ಲಿ ಭಾಗವತ ಪ್ರವಚನ ಉದ್ಘಾಟನೆ


ಕಿನ್ನಿಗೋಳಿ : ನಮ್ಮ ಕೆಲಸಗಳ ಒತ್ತಡದ ಮಧ್ಯೆ ಮಕ್ಕಳಿಗೆ ಸಮಯ ಕೊಡುವ ಅವರನ್ನು ತಿದ್ದಿ ಬೆಳೆಸುವ ನಿಟ್ಟಿನಲ್ಲಿ ಎಚ್ಚರ ಹೆತ್ತವರಿಗೆ ಇರಬೇಕು. ಭಗವಂತನ ಕುರಿತಾದ ಚಿಂತನೆ ನಮ್ಮಲ್ಲಿ ನೆಮ್ಮದಿ ಸ್ತೈರ್ಯ ಧೈರ‍್ಯ ಮೂಡಿಸುತ್ತದೆ. ಬದುಕಿನಲ್ಲಿ ನಮ್ಮ ಕರ್ತವ್ಯಗಳನ್ನು ಎಚ್ಚರಿಸುತ್ತದೆ ಎಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್ ಕುತ್ಪಾಡಿ ಕೃಷ್ಣರಾಜ ಆಚಾರ್ಯ ಹೇಳಿದರು.
ಅವರು ಕಿನ್ನಿಗೋಳಿ ರಾಮಮಂದಿರದಲ್ಲಿ ಐದು ದಿನಗಳ ಕಾಲ ಅನಂತ ಪ್ರಕಾಶ ಬಳಗದ ಸಂಯೋಜನೆಯಲ್ಲಿ ನಡೆಯುವ ಶ್ರೀಮದ್ ಭಾಗವತ ಪ್ರವಚನದ ಉದ್ಘಾಟನೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ರಾಮಮಂದಿರದ ಅರ್ಚಕರಾದ ಗಿರೀಶ್ ಭಟ್, ರಾಜೇಶ್ ನಾಯಕ್, ಬಾಕೃಷ್ಣ ಉಡುಪ, ಭಾರತೀ ಸುರೇಂದ್ರ ಶೆಣೈ, ಅನಂತ ಪ್ರಕಾಶದ ಕೊಡೆತ್ತೂರು ಸಚ್ಚಿದಾನಂದ ಉಡುಪ, ಶಕುನ ಉಡುಪ ಮತ್ತಿತರರಿದ್ದರು. ತಾ. ೨೮ರವರೆಗೆ ದಿನಂಪ್ರತಿ ಸಂಜೆ ಮಧ್ಯಾಹ್ನ ೩ರಿಂದ ೪.೩೦ರವರೆಗೆ ಕೃಷ್ಣರಾಜ ಆಚಾರ್ಯರಿಂದ ಪ್ರವಚನ ನಡೆಯಲಿದೆ

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807